ಗದಗ :ರೋಣ ತಾಲೂಕಿನ- ಅಬ್ಬಿಗೇರಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್, ಡಾ.ಬಾಬು ಜಗಜೀವನ ರಾಮ್ ಅಭಿಮಾನಿ ಬಳಗದಿಂದ ವಿಶ್ವಜ್ಞಾನಿ ಭಾರತ ರತ್ನ ಸವಿಧಾನ ಶಿಲ್ಪಿ ಶಿಕ್ಷಣ ಪ್ರೇಮಿ ಹೋರಾಟಗಾರರಾದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 6,8 ಅಡಿ ಎತ್ತರದ (ಪುತ್ಥಳಿ) ಮೂರ್ತಿ ಅನಾವರಣ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಪರಮಪೂಜ್ಯ ಶ್ರೀ ಮ.ನಿ.ಪ್ರ. ಶಿವಕುಮಾರ್ ಸ್ವಾಮೀಜಿಗಳು ನಂದಿವೇದಿ ಮಠ ಕಪ್ಪತಗುಡ್ಡ ಸಂಸ್ಥಾನ ಮಠ ಡೋಣಿ ಮತ್ತು ಪ್ರಮುಖರಾದ ಬಸವರಾಜ್ ಶರಣರು ಯಲ್ಲಾ ಲಿಂಗೇಶ್ವರ ಮಠ ಅಬ್ಬಿಗೇರಿ ಮೂರ್ತಿ, ಉದ್ಘಾಟಕರಾದ ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮಿಥುನಗೌಡ ಜಿ ಪಾಟೀಲ್ ಸಮಾರಂಭದ ಅಧ್ಯಕ್ಷರಾದ ಡಾ. ಆರ್ ಜಿ ಬಸವ ರೆಡ್ಡಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಗದಗ್ ಸುರೇಶ್ ನಾಯ್ಕರ್ ಪ್ರಗತಿಪರ ಚಿಂತಕರು ಅಬ್ಬಿಗೇರಿ ವೇದಿಕೆ ಮೇಲೆ ಎಲ್ಲಾ ಗಣ್ಯಮಾನ್ಯರು ಸೇರಿ ಡಾ. ಬಿ ಆರ್ ಅಂಬೇಡ್ಕರ್, ಡಾ. ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಗಿಡಕ್ಕೆ ನೀರು ಹಾಕಿದರು.
ದಲಿತ ಸಂಘಟನೆಯ ಅಧ್ಯಕ್ಷರಾದ ಡಿ ಹನುಮಂತ ಮಾತನಾಡಿ ಇವತ್ತು ನಾವು ಈ ಕಾರ್ಯಕ್ರಮ ಮಾಡಬೇಕಾದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ತಮ್ಮ ಬುದ್ಧಿಶಕ್ತಿಯಿಂದ ವಿಶ್ವದಲ್ಲಿ ಓದಿ ನಮ್ಮ ಭಾರತಕ್ಕೆ ಕಾನೂನು ಒಂದೇ ಜಾತಿ ಭೇದ ಭಾವ ನಮ್ಮ ಹತ್ತಿರ ಇರಬಾರದು ಅದಕ್ಕೆ ಈ ಸಂವಿಧಾನ ಎಲ್ಲರಿಗೂ ಅನುಸಾರವಾಗಿ ಇರಬೇಕು ಅದಕ್ಕೆ ತಾಯಂದಿರು ಕೇಳಿಕೊಳ್ಳುವುದೇನೆಂದರೆ ಒಂದು ವಿಶ್ವಮಾನವನ ಒಂದು ಗುರುತಾಗಿ ಇರಬೇಕಾದರೆ ನಮಗೆ ಮಕ್ಕಳಿಗೆ ವಿದ್ಯಾಭ್ಯಾಸ ಒಂದು ಆಸ್ತಿಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಭಾಗವಹಿಸಿದ ವಾಲ್ಮೀಕಿ ಮಹರ್ಷಿ ಅಧ್ಯಕ್ಷರಾದ ಬಸವರಾಜ್ ತಳವಾರ್ ಸಂಜಯ್ ದೊಡ್ಮನಿ ದಲಿತ ಸಂಘಟನೆ ಅಧ್ಯಕ್ಷರು ಮತ್ತು ಊರಿನ ಗ್ರಾಮಸ್ಥರು ಗುರಿ ಹಿರಿಯರು ಯುವಕ ಮಿತ್ರರು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ ಶರಣಪ್ಪಗೌಡ. ಸಕ್ಕರಗೌಡರ




















