ಹುನಗುಂದ : ದೇಶ ಸೇವೆ ಎನ್ನುವುದು ಕೇವಲ ಉದ್ಯೋಗವಲ್ಲ ಅದು ರಾಷ್ಟ್ರದ ಮೇಲಿನ ಬದ್ಧತೆ ತ್ಯಾಗ ಮತ್ತು ಕರ್ತವ್ಯದ ಸಂಕೇತವಾಗಿದೆ ಅಗ್ನಿವೀರರಾಗಿ ಆಯ್ಕೆಯಾದ ಯುವಕರು ತಮ್ಮ ಕುಟುಂಬ ಗ್ರಾಮ ತಾಲೂಕ ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದು ಇತರ ಯುವಕರಿಗೂ ಮಾದರಿಯಾಗಿದ್ದಾರೆಂದು, ಹುನಗುಂದದ ವಿ ಎಂ ಕೆ ಎಸ್ ಆರ್ ವಿ ಕಲಾ ವಿಜ್ಞಾನ ಹಾಗೂ, ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಆರ್ ಗೋಲ್ಗುಂಡ ಹೇಳಿದರು.
ಅವರು ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆಯಾದವರಿಗೆ ಕಾಲೇಜಿನಲ್ಲಿ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯನು ಎಷ್ಟೇ ದೊಡ್ಡ ಆಸ್ತಿ ಸಂಪಾದಿಸಿದರು ಅಥವಾ ಉನ್ನತ ಹುದ್ದೆ ಅಲಂಕರಿಸಿದರು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ ಆದರೆ ದೇಶ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವವರು ಜನರ ಹೃದಯಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಹೇಳಿದರು.
ಪ್ರೊಫೆಸರ್ ಎಸ್ ಹೆಚ್ ಬೊಳಿ ಶೆಟ್ಟರ್ ಮಾತನಾಡಿ ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಂಡು ಯಾವುದ ಸಂದರ್ಭದಲ್ಲಿ, ತಮಗೆ ಬರುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತಹ ಸಾಮರ್ಥ್ಯವನ್ನು ಹೊಂದಬೇಕೆಂದು ಹೇಳಿದರು
ಕ್ರೀಡಾ ಅಧಿಕಾರಿ ಲೆಫ್ಟಿನೆಂಟ್ ಎಸ್ ಬಿ ಚಳಿಗೇರಿ ಮಾತನಾಡಿ ದೇಶದ ಅಭಿವೃದ್ಧಿಗೆ ಯೋಧರು ಮತ್ತು ರೈತರು ಎರಡು ಪ್ರಮುಖ ಶಕ್ತಿಗಳಾಗಿದ್ದು ದೇಶದ ಗಡಿಯನ್ನು ಕಾಯುವ ಸೈನಿಕರು ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಕೊಡುಗೆ ಅಪಾರವಾಗಿದೆ ಭಾರತಮಾತೆಯ ಋಣ ತೀರಿಸಲು ದೇಶ ಸೇವೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಸಮಾಜ ಸೇವೆಯು ದೇಶ ಸೇವೆಯ ಭಾಗವೇ ಆಗಿದೆ ಎಂದು ತಿಳಿಸಿದರು.
ಲೆಫ್ಟಿನೆಂಟ್ ವಿರೇಶ ರಾಯರ ಅವರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ತಿಪ್ಪೇಸ್ವಾಮಿ ಡಿ.ಎಸ್. ವಂದಿಸಿದರು.
- ಕರುನಾಡ ಕಂದ ಸುದ್ದಿ




















