ಕೊಟ್ಟೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ ಇವರು ರೇಣುಕಾ ಸಭಾ ಭವನದಲ್ಲಿ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪ್ರೋತ್ಸಾಹ ಪುರಸ್ಕಾರ, ಸೇವಾ ರತ್ನ ಪುರಸ್ಕಾರ-2026 ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಪ್ರೇರಣಾ ನುಡಿಗಳನ್ನು ನುಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಇವರು ಇಂದು ಸರ್ಕಾರಿ ನೌಕರರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸರ್ಕಾರಿ ಹಾಗೂ ಸಾರ್ವಜನಿಕರ ಸೇವೆಯಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ದಿನದಲ್ಲಿ ಓಡಲೇ ಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅವರು ಸಹಾ ಅಂಕಗಳಿಕೆಗಾಗಿ ಒತ್ತಡದಲ್ಲಿದ್ದಾರೆ. ಅದರಲ್ಲಿ ಯಶಸ್ವಿಯಾಗಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಮುಂದಿನ ಹೆಜ್ಜೆಗೆ ಅಣಿಯಾಗಬೇಕಿದೆ. ಹೀಗೆ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಸಮರ್ಪಣಾ ಭಾವದಿಂದ ಸೇವೆ ಮಾಡಿದ ನೌಕರರಿಗೆ ಇಂತಹ ಕಾರ್ಯಕ್ರಮಗಳ ಮೂಲಕ ನೀಡುವ ಪ್ರಶಸ್ತಿಗಳು ಆ ವ್ಯಕ್ತಿಯ ಜವಾಬ್ದಾರಿ ಮತ್ತು ಗೌರವವನ್ನು ಹೆಚ್ಚಿಸುತ್ತವೆ ಎಂದರು.
ತಹಶೀಲ್ದಾರ್ ಅಮರೇಶ್ ಜಿ ಕೆ ಕಾರ್ಯಕ್ರಮ ಉದ್ಘಾಟಿಸಿದರು , ಇಒ ಡಾ.ಬಿ ಆನಂದ ಕುಮಾರ್, ಮುಖ್ಯಪಶು ವೈದ್ಯಾಧಿಕಾರಿಗಳು, ಚಂದ್ರನಾಯ್ಕ ಎಂ ಇವರು ಮಾತನಾಡಿದರು.
ನೌಕರರ ಸಂಘವು ಹಲವಾರು ನೌಕರರ ಪರವಾದ ಹಲವಾರು ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ನೌಕರರ ಮಕ್ಕಳನ್ನು ಪ್ರೋತ್ಸಾಹಿಸಲು ಹಾಗೂ ನೌಕರರು ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆಯನ್ನು ಮಾಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪುರಸ್ಕಾರ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ. ನೌಕರರ ಪ್ರೋತ್ಸಾಹ ಸಾಧ ಹೀಗೇ ಇರಲಿ ಎಂದು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ವಾರ್ಷಿಕ ವರದಿ ಮಂಡಿಸಿದರು.
ಹೇಮಚಂದ್ರ ಪ್ರಾರ್ಥನೆ ಮಾಡಿದರೆ, ಬಿ ಟಿ ಮಂಜುನಾಥ ಸ್ವಾಗತಿಸಿದರು. ಸಿ ಮ ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಶೇ 90 ಕ್ಕಿಂತ ಹೆಚ್ಚಿನ ಅಂಗಳೊಂದಿಗೆ ಉತ್ತೀರ್ಣರಾದ 28 ಸರ್ಕಾರಿ ನೌಕರರ ಮಕ್ಕಳಿಗೆ ಪುರಸ್ಕಾರ ಹಾಗೂ ವಿವಿಧ ಇಲಾಖೆಯ 32 ಅಧಿಕಾರಿ/ನೌಕರರಿಗೆ “ಸೇವಾ ರತ್ನ ಪುರಸ್ಕಾರ-2026” ನೀಡಿ ಗೌರವಿಸಲಾಯಿತು. ಸ್ನೇಹಲೋಕ ಮೆಲೋಡಿಸ್ ತಂಡದವರ ಸಂಗೀತವು ಸಭಿಕರನ್ನು ರಂಜಿಸಿತು.
- ಕರುನಾಡ ಕಂದ ಸುದ್ದಿ




















