ಮೈಸೂರು ಜಿಲ್ಲೆಯ ಹುಣಸೂರು: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಎನ್ಎಸ್ಎಸ್ ಘಟಕದ ವತಿಯಿಂದ ಈ ದಿನ “ವಿಶೇಷ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ (SIR)” ಅಂಗವಾಗಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಾಥಾ ಅಂಗವಾಗಿ ಎನ್ಎಸ್ಎಸ್ ಸ್ವಯಂ ಸೇವಕಿಯರು ಹಾಗೂ ವಿದ್ಯಾರ್ಥಿಗಳು ಹುಣಸೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು “ನನ್ನ ಮತ, ನನ್ನ ಹಕ್ಕು”,
” SIR ನಲ್ಲಿ ಹೊಸ ಭಾವಚಿತ್ರ ಬದಲಾಯಿಸಬಹುದು”, ” SIR ನನ್ನ ಹಕ್ಕು”,
” SIR ಅಂತರ್ಜಾಲದ ಮೂಲಕವೂ ದಾಖಲಿಸಬಹುದು”,
” ಸಹಕಾರಕ್ಕಾಗಿ BLO ಸಂಪರ್ಕಿಸಿ”,
“ಅನಕ್ಷರಸ್ಥರಿಗೆ ಸಹಾಯ ಮಾಡಿ”, ಹೀಗೆ ಮೊದಲಾದ ಘೋಷಣೆಗಳನ್ನು ಕೂಗಿ ಅರಿವು ಮೂಡಿಸಿದರು.
ಈ ಜಾಥಾ ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲರಾದ ಶ್ರೀ ನಟರಾಜು. ಕೆ.ಎಸ್, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಶ್ರೀ ದೇವರಾಜು.ಸಿ, ಉಪನ್ಯಾಸಕರಾದ ಶ್ರೀ ಜಗದೀಶ. ಶ್ರೀ ಸರ್ವೋತ್ತಮ್, ಡಿ. ಟಿ, ಶ್ರೀ ಗಿರೀಶ್. ಹೆಚ್.ಎನ್, ಶ್ರೀ ಚಂದ್ರಕಾಂತ್, ಶ್ರೀಮತಿ ತೇಜಸ್ವಿನಿ, ಶ್ರೀಮತಿ ಕೆ. ಆರ್. ಶೀಲಾ, ಶ್ರೀ ಸುರೇಶ್, ಶಶಿಕುಮಾರ್, ಕೀರ್ತಿಕುಮಾರ್, ದೈಹಿಕ ಉಪನ್ಯಾಸಕರಾದ ಕುಮಾರಿ ಸಲ್ಮಾ ಹಾಗೂ ಎನ್ಎಸ್ಎಸ್ ಸ್ವಯಂ ಸೇವಕಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಿದರು.




















