ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡ ಬೋಧನೆಗೆ ಐಚ್ಚಿಕ ಕನ್ನಡ ಪದವೀಧರರು ಏಕೆ ಬೇಡ?

ಆಂಗ್ಲ ಭಾಷೆ ಬೋಧನೆಗೆ ಐಚ್ಚಿಕ ಆಂಗ್ಲ ಭಾಷೆ ಓದಿದವರೇ ಬೇಕು ಎಂಬ ನಿಯಮವಿರುವಾಗ, ಕನ್ನಡ ಬೋಧನೆಗೆ ಐಚ್ಚಿಕ ಕನ್ನಡ ಪದವೀಧರರು ಏಕೆ ಬೇಡ?

ಸಮಾಜ ವಿಜ್ಞಾನ ಶಿಕ್ಷಕರಿಂದಲೇ ಅಥವಾ ಇತರ ವಿಷಯದ ಶಿಕ್ಷಕರಿಂದಲೇ ಕನ್ನಡ ಬೋಧನೆ ಮಾಡಿಸುವುದು ಕನ್ನಡ ಭಾಷೆಗೂ ಹಾಗೂ ಕನ್ನಡವನ್ನೇ ನಂಬಿ ಉನ್ನತ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೂ ಮಾಡುವ ಘೋರ ಅನ್ಯಾಯವಾಗಿದೆ. ದುರಾದೃಷ್ಟವಶಾತ್, ಇಂದಿಗೂ ಇದೇ ಪರಿಸ್ಥಿತಿ ಮುಂದುವರೆದಿದ್ದು, ಹೊಸ ನೇಮಕಾತಿಗಳಲ್ಲೂ ಪ್ರತ್ಯೇಕವಾಗಿ ಕನ್ನಡ ಶಿಕ್ಷಕರ ಹುದ್ದೆಗಳನ್ನು ಕರೆಯುತ್ತಿಲ್ಲ. ಇದರಿಂದಾಗಿ ಉನ್ನತ ವ್ಯಾಸಂಗ ಮಾಡಿ, ಶಿಕ್ಷಕ ವೃತ್ತಿಯ ಕನಸು ಕಾಣುತ್ತಿರುವ ನಮ್ಮಂತಹ ಸಾವಿರಾರು ಅರ್ಹ ಯುವಕ, ಯುವತಿಯರಿಗೆ ತೀವ್ರ ನಿರಾಶೆಯಾಗಿದೆ.

ಆದುದರಿಂದ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ತಾವು ತಕ್ಷಣವೇ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ, ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಗಮನ ಸೆಳೆಯಬೇಕು. ಜಿ.ಪಿ.ಟಿ ನೇಮಕಾತಿಯಲ್ಲಿ ಪ್ರತ್ಯೇಕವಾಗಿ “ಕನ್ನಡ ಭಾಷಾ ಶಿಕ್ಷಕರ” ಹುದ್ದೆಗಳನ್ನು ಸೃಷ್ಟಿಸಿ, ಐಚ್ಚಿಕ ಕನ್ನಡ ಪದವೀಧರರಿಗೆ ಮಾತ್ರ ಬೋಧಿಸಲು ಅವಕಾಶ ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅತ್ಯಂತ ಕಳಕಳಿಯಿಂದ ವಿನಂತಿಸುತ್ತೇನೆ.
ವಂದನೆಗಳೊಂದಿಗೆ,

  • ಸುಚಿತ್ರ ,ಕನ್ನಡ ಅತಿಥಿ ಉಪನ್ಯಾಸಕಿ
    ದಕ್ಷಿಣ ಕನ್ನಡ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!