29ನೇ ಆಲ್ ಇಂಡಿಯಾ ಶಿಟೊರಿಯೊ ಕರಾಟೆ ಕ್ರೀಡಾಕೂಟದಲ್ಲಿ ಮೇಲುಗೈ ಸಾಧಿಸಿದ ಜೇವರ್ಗಿ ತಾಲೂಕ ವಿದ್ಯಾರ್ಥಿಗಳು.
ಮೈಸೂರು ನಗರದ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕರಾಟೆ ಕೋಚ್ ರಾಹುಲ್ ಎ ಪಂಚಬಾಯ ನೇತೃತ್ವದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಮೋಘವಾದ ಸಾಧನೆ ಮಾಡಿದ್ದಾರೆ ಎಂದು ಜೇವರ್ಗಿ ತಾಲೂಕ ಜೇನ್ನ ಶಿಟೊರಿಯೊ ಕರಾಟೆ ಅಸೋಸಿಯೇಷನ್ ತಾಲೂಕ ಉಪಾಧ್ಯಕ್ಷರಾದ ಅಮರನಾಥ ಮಧುರಕರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ ತಾಲೂಕಿನಿಂದ ಆದರ್ಶ ತಂದೆ ವೈದ್ಯನಾಥ ಎರಡು ಚಿನ್ನದ ಪದಕ ಹಾಗೂ ಆದಿನಾಥ್ ತಂದೆ ರಾಮನಾಥ ಭಂಡಾರಿ ಒಂದು ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ ಅದೇ ರೀತಿಯಾಗಿ ದೀಪಾ /ಆಗತ್ರಾ ರಾವ. ಕಂಚಿನ ಪದಕ ಹಾಗೂ ದೀಪಾ /ತಂದೆ ಆಗತ್ರಾರಾವ್. ಕಂಚಿನ ಪದಕ ಹಾಗೂ ಪ್ರವೀಣ್ ತಂದೆ ಚೌಡಯ್ಯ ರಾಮ್ ಒಂದು 1 ಬೆಳ್ಳಿಯ ಪದಕ ಒಂದು ಕಂಚಿನ ಪದಕ ಒಟ್ಟು ಆರು ಪದಕಗಳು ಜೇವರ್ಗಿ ತಾಲೂಕಿನ ಪಾಲಾಗಿವೆ ಎಂದು ಜೇನ್ನ ಶೀಟೊರಿಯೊ ಕರಾಟೆ ಸಂಸ್ಥೆಯ ತಾಲೂಕ ಉಪಾಧ್ಯಕ್ಷರಾದ ಅಮರನಾಥ ಮಧುರಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮುಂದೆ ಬರುವಂತಹ ದಿನಗಳಲ್ಲಿ ಜೇವರ್ಗಿ ತಾಲೂಕಿನ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಪು ಮೂಡಿಸಲಿ ಎಂದು ಜೇನ್ನ್ ಶೀಟೊ ರಿಯೊ ಅಸೋಸಿಯೇಷನ್ ಜೇವರ್ಗಿ ತಾಲೂಕ ಅಧ್ಯಕ್ಷರಾದ ಅಧ್ಯಕ್ಷರಾದ ಜೆಟ್ಟೆಪ್ಪ ಎಸ್ ಪೂಜಾರಿ ಅವರು ಪದಕದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ ವಿದ್ಯಾರ್ಥಿಗಳ ಹಾಗೂ ರಾಹುಲ ಎ ಪಂಚಬಾಯ ಅವರ ಸತತ ಪರಿಶ್ರಮವೇ ವಿದ್ಯಾರ್ಥಿಗಳ ಜಯಬೇರಿಗೆ ಕಾರಣವಾಗಿದೆ ಎಂದು ಮಧುರಕರವರು ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















