ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೀಟ್-2026 ಟಾಪರ್ ಆಟೋ ಚಾಲಕನ ಪುತ್ರಿ ಮದೀಹಾ ಫಾತಿಮಾ ಯಶೋಗಾಥೆ

ಕಲಬುರಗಿ : ಪ್ರತಿಯೊಬ್ಬ ಯಶಸ್ವಿ ವಿದ್ಯಾರ್ಥಿಯ ಹಿಂದೆ ಕಠಿಣ ಪರಿಶ್ರಮದ ಕಥೆಯಿರುತ್ತದೆ. ಆಟೋ ಚಾಲಕ ಖಾಜಾ ಮೊಯಿನುದ್ದೀನ್ ಅವರ ಪುತ್ರಿ ಮದೀಹಾ ಫಾತಿಮಾ ಅವರ ಯಶೋಗಾಥೆಯೂ ಅಂತಹದ್ದೇ ಒಂದು ಸ್ಪೂರ್ತಿದಾಯಕ ಉದಾಹರಣೆ.

ಪ್ರಾಮಾಣಿಕ ಪರಿಶ್ರಮ, ಪೋಷಕರ ಸಮರ್ಪಣೆ ಹಾಗೂ ಸರಿಯಾದ ಮಾರ್ಗದರ್ಶನ ದೊರೆತರೆ ಯಾವುದೇ ಕನಸು ಅಸಾಧ್ಯವಲ್ಲ ಎಂಬುದನ್ನು ಅವರ ಸಾಧನೆ ಸಾಬೀತುಪಡಿಸಿದೆ.
ಕಲಬುರಗಿಯ ಅಲ್-ಶಾರೆ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ನ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಮದೀಹಾ, ಕರ್ನಾಟಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2026ರಲ್ಲಿ ಶೇ.98.17 ಅಂಕಗಳನ್ನು ಗಳಿಸಿದರು. ನಂತರ ನಡೆದ ನೀಟ್-2026 ಪರೀಕ್ಷೆಯಲ್ಲಿ 558 ಅಂಕಗಳನ್ನು ಗಳಿಸಿ ಮತ್ತೊಂದು ಮಹತ್ತರ ಸಾಧನೆ ಮಾಡಿದರು.
ಮದೀಹಾ ಅವರ ತಂದೆ ಖಾಜಾ ಮೊಯಿನುದ್ದೀನ್ ಅವರು ಆಟೋ ಚಾಲಕರಾಗಿ ದುಡಿಯುತ್ತ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಆರ್ಥಿಕವಾಗಿ ಸೀಮಿತ ಪರಿಸ್ಥಿತಿಯಲ್ಲಿದ್ದರೂ, ತಮ್ಮ ಮಗಳು ಒಂದು ದಿನ ವೈದ್ಯೆಯಾಗಿ ಬಿಳಿ ಕೋಟ್ ಧರಿಸಬೇಕು ಎಂಬ ಮಹತ್ತರ ಕನಸನ್ನು ಅವರು ಎಂದಿಗೂ ಕೈಬಿಡಲಿಲ್ಲ.
ಬಹುತೇಕ ಪೋಷಕರು ವೃತ್ತಿಪರ ಶಿಕ್ಷಣದ ವೆಚ್ಚದ ಬಗ್ಗೆ ಚಿಂತಿಸುತ್ತಾರೆ. ಆದರೆ ಆರ್ಥಿಕ ಸಂಕಷ್ಟಗಳು ಮೊಯಿನುದ್ದೀನ್ ಅವರ ದೃಢಸಂಕಲ್ಪವನ್ನು ಎಂದಿಗೂ ಕುಗ್ಗಿಸಲಿಲ್ಲ.

ಈ ಪಯಣದಲ್ಲಿ ಮದೀಹಾ ಅವರ ತಾಯಿಯೂ ಸದಾ ಬೆನ್ನೆಲುಬಾಗಿ ನಿಂತರು. ಅವರ ನಿರಂತರ ಪ್ರೋತ್ಸಾಹ, ಪ್ರಾರ್ಥನೆಗಳು ಮತ್ತು ಮಾನಸಿಕ ಧೈರ್ಯವೇ ಮದೀಹಾ ಅವರ ಯಶಸ್ಸಿನ ಭದ್ರ ಅಡಿಪಾಯವಾಯಿತು.
ಮದೀಹಾ ಹೇಳುವಂತೆ, “ನಾನು ನನ್ನ ಸಾಮರ್ಥ್ಯದ ಬಗ್ಗೆ ಅನುಮಾನಪಟ್ಟ ಸಂದರ್ಭಗಳಲ್ಲಿಯೂ ನನ್ನ ತಂದೆ-ತಾಯಿ ನನ್ನ ಮೇಲೆ ನಂಬಿಕೆ ಕಳೆದುಕೊಳ್ಳಲಿಲ್ಲ. ಅವರ ವಿಶ್ವಾಸವೇ ನನ್ನ ಅತಿದೊಡ್ಡ ಶಕ್ತಿಯಾಯಿತು.”

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಅನೇಕ ವಿದ್ಯಾರ್ಥಿಗಳಂತೆ ಮದೀಹಾ ಕೂಡ ನಿರಾಶೆಯ ಕ್ಷಣವನ್ನು ಎದುರಿಸಿದ್ದರು. ತಮ್ಮ ಮೊದಲ ನೀಟ್ ಪರೀಕ್ಷೆಯಲ್ಲಿ ಅವರು 527 ಅಂಕಗಳನ್ನು ಗಳಿಸಿದರು. ಅವರು ಪ್ರಾಮಾಣಿಕವಾಗಿ ತಯಾರಿ ನಡೆಸಿದ್ದರೂ, ಪರೀಕ್ಷೆಯ ಒತ್ತಡ ಮತ್ತು ಸಮಯದ ಸಮರ್ಪಕ ನಿರ್ವಹಣೆಯ ಕೊರತೆಯಿಂದ ತಮ್ಮ ನಿಜವಾದ ಸಾಮಥ್ರ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ.
ಅಂತಹ ಹಿನ್ನಡೆಯು ಅನೇಕ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು. ಆದರೆ ಮದೀಹಾ ವಿಭಿನ್ನ ಮಾರ್ಗವನ್ನು ಆರಿಸಿಕೊಂಡರು.
ಅವರು ಪರಿಸ್ಥಿತಿಯನ್ನು ದೂಷಿಸುವ ಬದಲು, ತಮ್ಮ ಪ್ರತಿಯೊಂದು ತಪ್ಪನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಿದರು. ಸಮರ್ಪಕ ಪುನರಾವರ್ತನೆಯ ಕೊರತೆ ಮತ್ತು ಪರೀಕ್ಷೆಯ ಸಮಯದಲ್ಲಿ ಉಂಟಾದ ಗೊಂದಲದಿಂದ ಅಮೂಲ್ಯ ಅಂಕಗಳನ್ನು ಕಳೆದುಕೊಂಡಿರುವುದನ್ನು ಅರಿತುಕೊಂಡರು.
ಮರು ನೀಟ್-2026 ಪರೀಕ್ಷೆಯ ಅವಕಾಶ ಘೋಷಣೆಯಾದಾಗ, ಅದನ್ನು ಅವರು ದೇವರ ಕೃಪೆಯಿಂದ ದೊರೆತ ಎರಡನೇ ಅವಕಾಶ ಎಂದು ಸ್ವೀಕರಿಸಿದರು. ಮದೀಹಾ ಅವರ ಅಭಿಪ್ರಾಯದಲ್ಲಿ, ಪ್ರತಿಭೆ ಮಾತ್ರ ಸಾಕಾಗುವುದಿಲ್ಲ; ಪ್ರತಿಯೊಬ್ಬ ವಿದ್ಯಾರ್ಥಿಗೂ ಸರಿಯಾದ ಮಾರ್ಗದರ್ಶನ ಅತ್ಯಗತ್ಯ.

ಆ ದಾರಿಯನ್ನು ಅವರು ಅಲ್-ಶಾರೆ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಕಂಡುಕೊಂಡರು. ಇಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವೈಯಕ್ತಿಕ ಗಮನ, ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆಯುತ್ತದೆ.
ಸಂಸ್ಥೆಯ ಅಧ್ಯಕ್ಷರಾದ ಡಾ. ಗುಲಾಮ್ ರಬ್ಬಾನಿ , ಉಪಾಧ್ಯಕ್ಷೆ ಫರ್ಹಾನಾ ರಬ್ಬಾನಿ , ಮುಖ್ಯ ಟ್ರಸ್ಟಿ ಆರ್ಕಿಟೆಕ್ಟ್ ವಫಾಕ್ ಶಾರೆ ಹಾಗೂ ಟ್ರಸ್ಟಿ ಅಮೀನಾ ಫರ್ಹೀನ್ ಮ್ಯಾಡಂ ಅವರ ದೂರದೃಷ್ಟಿಯ ನಾಯಕತ್ವವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಮದೀಹಾ ಅವರು ಸಂಸ್ಥೆಯ ಬೋಧಕ ವೃಂದದ ಸಮರ್ಪಿತ ಮಾರ್ಗದರ್ಶನಕ್ಕೂ ವಿಶೇಷ ಕೃತಜ್ಞತೆ ಸಲ್ಲಿಸುತ್ತಾರೆ. ಅವರು ಕೇವಲ ವಿಷಯಗಳನ್ನು ಬೋಧಿಸದೇ, ಪರಿಕಲ್ಪನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು, ಪರಿಣಾಮಕಾರಿ ಅಧ್ಯಯನ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಆತ್ಮವಿಶ್ವಾಸವನ್ನು ಬೆಳೆಸಲು ನೆರವಾದರು.

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!