ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿವೃತ್ತಿ ಹಿರಿಯ ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮಗೆ ಸನ್ಮಾನದ ಬೀಳ್ಕೊಡುಗೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಿರಿಯ ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮ ಅವರ ವಯೋ ನಿವೃತ್ತಿ ಹಿನ್ನಲೆ ಅವರಿಗೆ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸುವ ಮೂಲಕ ಶುಕ್ರವಾರ ಬೀಳ್ಕೊಡಲಾಯಿತು.

ಮುಖ್ಯಗುರು ಎಚ್.ಪಿ.ಸೋಮಶೇಖರ ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ಸರ್ಕಾರಿ ಹುದ್ದೆ ಅಲಂಕರಿಸಿದ ದಿನದಿಂದಲೂ ಮಕ್ಕಳ ಮತ್ತು ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಕಳೆದ 39 ವರ್ಷ ಸತತ ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಮುಂದಿನ ವಯೋ ನಿವೃತ್ತಿ ಜೀವನವೂ ಸದಾ ಆರೋಗ್ಯ, ಸಮೃದ್ಧಿಯಿಂದ ಕೂಡಿರಲಿ ಎಂದರು.

ನಂತರ ವಯೋ ನಿವೃತ್ತಿ ಹೊಂದಿದ ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಕ್ಕಳೊಂದಿಗೆ ಹಲವು ವರ್ಷ ಕಳೆದಿರುವೆ. ಮಕ್ಕಳು ಭವಿಷ್ಯ ಶಿಕ್ಷಣದಲ್ಲಿ ಅಡಗಿದ್ದು, ಅವರ ಏಳಿಗೆ ಮತ್ತು ಕಲಿಕೆಗಾಗಿ ದಿನನಿತ್ಯದಲ್ಲಿ ಶ್ರಮಿಸಲಾಗುತ್ತಿತ್ತು. ಈಗ ಅನಿವಾರ್ಯವಾಗಿ ವಯೋ ನಿವೃತ್ತಿ ಹೊಂದಿ, ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಇಲ್ಲಿತನ ನಮ್ಮ ಜೊತೆಗೂಡಿ ಕೆಲಸಕ್ಕೆ ಸಹಕರಿಸಿ, ತಮಗೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

ತದ ನಂತರ ವಯೋ ನಿವೃತ್ತಿ ಹೊಂದಿದ ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮ ಇವರಿಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯಗುರುಗಳು, ಶಿಕ್ಷಕ ವೃಂದದರು, ಸಂಘ-ಸಂಸ್ಥೆಯವರು, ಪೋಷಕರು ಸನ್ಮಾನಿಸಿ ವಿಜೃಂಭಣೆಯಿಂದ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಕೆ.ಶಿವುಕುಮಾರ, ಸೊಸೈಟಿ ಅಧ್ಯಕ್ಷ ಗೊರವರ ಹನುಮಂತಪ್ಪ, ಪ್ರೌಢಶಾಲಾ ಮುಖ್ಯಗುರು ನಂದಕಿಶೋರ್, ಎಸ್ಡಿಎಂಸಿ ಅಧ್ಯಕ್ಷ ಶಿವರಾಜ್ ಕುಮಾರ, ದೇವರಮನೆ ಪಂಪಯ್ಯ, ಸದಸ್ಯರಾದ ಸಿ.ಡಿ.ಗಾದೆಪ್ಪ, ಲಿಗಾಡಿ ತಿಪ್ಪಯ್ಯ, ಎಚ್.ಕಾಮಾಕ್ಷಿ, ಬಿ.ನಾಗೇಶ್ವರಿ, ಗೊರವರ ಲಕ್ಷಿö, ಹೊಸನಗರ ಶಾಲೆ ಮುಖ್ಯಗುರು ಪ್ರಕಾಶ್, ಎಸ್ಡಿಎಂಸಿ ಅಧ್ಯಕ್ಷ ಭಾವಿಕಟ್ಟೆ ಹೊನ್ನೂರಸ್ವಾಮಿ, ಮುಖಂಡರಾದ ಗೌಡ್ರು ಅಂಜಿನಪ್ಪ, ಉಮೇಶಗೌಡ, ಸುರೇಶಗೌಡ, ಗೌಡ್ರು ಷಣ್ಮುಕ, ಪೂಜಾರಿ ರಮೇಶ, ಕುಂಬಾರ ವಿರುಪಾಕ್ಷಿ, ಬೂದಾಳ್ ರವಿ, ಬಳ್ಳಾರಿ ರಮೇಶ, ದೇವರ ಮನೆ ಮಲ್ಲಿಕಾರ್ಜುನ, ಎನ್.ನಾಗರಾಜ, ಕೆ.ಕರಿಬಸಪ್ಪ, ಟಿ.ಎನ್.ಆರ್.ರಮೇಶ, ಎನ್.ನಾಗರಾಜ, ಸಂಗ್ಟಿ ಅಂಜಿನಪ್ಪ, ಗೌಡ್ರು ವೆಂಕಟೇಶ, ರಾಜ, ಜಗದೀಶ ಸೇರಿದಂತೆ ಮುಖ್ಯಗುರುಗಳು, ಶಿಕ್ಷಕರು, ಪೋಷಕರು, ಮುಖಂಡರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!