ಹದಿಹರೆಯದವರ ಆರೋಗ್ಯ ದಿನಾಚರಣೆ
ಬಳ್ಳಾರಿ / ಕಂಪ್ಲಿ : ಋತುಚಕ್ರ ಹೆಣ್ಣು ಮಕ್ಕಳ ಸಹಜ ಪ್ರಕ್ರಿಯೆಯಾಗಿದ್ದು ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಜಾಗೃತಿ ವಹಿಸಬೇಕು ಆರೋಗ್ಯ ಇಲಾಖೆಯ ಜಿಲ್ಲಾ ಸಂಯೋಜಕಿ ಲಕ್ಷ್ಮಿ ದೇವಿ ಹೇಳಿದರು.
ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಹಮ್ಮಿಕೊಂಡ ಪಿರಿಯಡ್ ಕಾರ್ಯಕ್ರಮದಲ್ಲಿ ಋತುಚಕ್ರದ ಸಮಸ್ಯೆಗಳನ್ನು ಮುಕ್ತವಾಗಿ ಪೋಷಕರಲ್ಲಿ ಹಂಚಿಕೊಳ್ಳುವುದು ಸೂಕ್ತ ಪೌಷ್ಠಿಕ ಆಹಾರ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳಿಂದ ವಿಮುಖರಾಗಬಹುದು ಎಂದರು. ಬಾಲಕಿಯರಲ್ಲಾಗುವ ಪ್ರೌಢಾವಸ್ಥೆಯ ದೈಹಿಕ, ಭಾವನಾತ್ಮಕ ಬದಲಾವಣೆ, ಋತುಚಕ್ರದ ನೋವು, ನೈರ್ಮಲ್ಯ, ಮುಂಜಾಗ್ರತಾ ಕ್ರಮ, ಸುರಕ್ಷತೆಯ ಸೂಕ್ತ ಸಲಹೆ ಕುರಿತು ಮಾಹಿತಿ ನೀಡಲಾಯಿತು.
ಹಲೋ ಮೈತ್ರಿ ಸಹಾಯವಾಣಿ, ಸ್ನೇಹ ಕ್ಲಿನಿಕ್ ಉಪಯೋಗ, ಅಪ್ರಾಪ್ತ ಗರ್ಭಿಣಿ, ಎಚ್ ಪಿವಿ ಲಸಿಕೆ ಕುರಿತು ಮಾಹಿತಿ ನೀಡಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ. ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಪ್ರಾಚಾರ್ಯ ಎನ್.ಮರೆಪ್ಪ, ಆಶಾ ಕಾರ್ಯಕರ್ತೆ ಶಾರದಾ, ಎಚ್ಐಒ ದೇವರಾಜ್, ಗಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















