
ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ತೋರುವ ಗುರುಗಳಿಗೆ ಗೌರವ ಸಲ್ಲಿಸಲು ಬಂದ ಪಿಎನ್ ಕೃಷ್ಣಮೂರ್ತಿ.

ಕೊರಟಗೆರೆಯಲ್ಲಿ ಗುರುಪೂರ್ಣಿಮೆಯ ವಿಶೇಷ ದಿನವಾದ ನಿನ್ನೆ ಪೂಜೆ ಸಲ್ಲಿಸಲು ಕ್ಷೇತ್ರಕ್ಕೆ ಆಗಮಿಸಿ ಪಿಎನ್ ಕೃಷ್ಣಮೂರ್ತಿ ಯವರು. ಸಾಯಿಬಾಬಾ ಮಂದಿರದಲ್ಲಿ ಪ್ರಾರ್ಥನೆ ಭಜನೆ ವಾಯು ಸೇವೆಯನ್ನು ಮಾಡಿ ಸ್ವಾಮಿಯ ಕೃಪೆಗೆ ಪಾತ್ರರಾಗಿ ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರನ್ನು ಕಂಡು ಇದು ಪರಮಾತ್ಮನನ್ನು ನೆನೆಯುವ ದಾರಿಯಾಗಿದೆ. ಎಲ್ಲಾ ದಿನಗಳಲ್ಲಿ ಪೂಜೆ ಮಾಡುವುದರಿಂದ ಗುರುವಿಗೆ ಗೌರವ ಸಿಗುತ್ತದೆ. ಸಾಯಿ ಬಾಬಾ ಅವರ ಆಶೀರ್ವಾದ ಪಡೆದು ಎಲ್ಲರಿಗೂ ಶುಭವಾಗಲಿ. ಈ ಗುರುಪೂರ್ಣಿಮೆಯ ಗುರು ಜಪವು ಎಲ್ಲಾ ಭಕ್ತರಿಗೆ ಜೀವನದಲ್ಲಿ ಹೊಸ ಸೌಭಾಗ್ಯ ಮತ್ತು ಸಮೃದ್ಧಿ ನೀಡಲಿ ಎಂದು ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಕ್ಕೆ ಎರಡು ಲಕ್ಷ ರೂ. ಗಳ ದೇಣಿಗೆಯನ್ನು ನೀಡಿ ಸಾಯಿಬಾಬ ಮಂದಿರ ಒಳಭಾಗಕ್ಕೆ ಪಿಓಪಿ ಅಲಂಕಾರ ಕೆಲಸ ಮಾಡಿಸುವುದಾಗಿ ಆಡಳಿತ ಮಂಡಳಿಗೆ ತಿಳಿಸಿದರು.
ಆಷಾಢ ಮಾಸದ ಪವಿತ್ರ ಹುಣ್ಣಿಮೆಯಂದು ಆಚರಿಸಲಾಗುವ ಗುರು ಪೂರ್ಣಿಮೆಯು ಭಾರತೀಯ ಪರಂಪರೆ ಹಾಗೂ ಆಧ್ಯಾತ್ಮಿಕ ಚಿಂತನೆಯಲ್ಲಿ ಅತ್ಯಂತ ಶ್ರೇಷ್ಠವಾದ ಪರ್ವ ದಿನವಾಗಿದೆ.
ಗುರು ಪೂರ್ಣಿಮೆಯ ದಿವ್ಯ ವಿಶೇಷತೆಯೆಂದರೆ ಇದು ಸಾಧಕರಿಗೆ ಜಪ, ಧ್ಯಾನ, ಸ್ವಾಧ್ಯಾಯ ಮತ್ತು ಕಠಿಣ ಆಧ್ಯಾತ್ಮಿಕ ಸಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಫಲದಾಯಕ ಸಮಯವಾಗಿದೆ. ಈ ದಿನದಂದು ಆಶ್ರಮಗಳಲ್ಲಿ ಹಾಗೂ ಮಠಗಳಲ್ಲಿ ಗುರುಗಳ ಪಾದುಕಾ ಪೂಜೆ ನಡೆಸಿ, ಗುರುಮಂತ್ರ ಜಪ ಮಾಡುವುದರಿಂದ ಮನಸ್ಸಿನ ಕಲುಷಿತತೆ ನಿವಾರಣೆಯಾಗಿ ದಿವ್ಯ ಚೈತನ್ಯವು ಜಾಗೃತಗೊಳ್ಳುತ್ತದೆ. ಚಾತುರ್ಮಾಸ ವ್ರತ ಪ್ರಾರಂಭವಾಗುವ ಈ ಸಮಯದಲ್ಲಿ ಸನ್ಯಾಸಿಗಳು ಮತ್ತು ಸಾಧಕರು ಒಂದೆಡೆ ಕುಳಿತು ಜ್ಞಾನಚಿಂತನೆ ಹಾಗೂ ಆತ್ಮಾವಲೋಕನದಲ್ಲಿ ತೊಡಗುತ್ತಾರೆ.
ಎಂಬಂತೆ ಗುರುವನ್ನು ತ್ರಿಮೂರ್ತಿಗಳ ಸ್ವರೂಪವೆಂದು ಭಾವಿಸಿ, ಅವರ ಚರಣಕಮಲಗಳಿಗೆ ನಮಿಸಿ ಅನುಗ್ರಹ ಪಡೆಯುವುದೇ ಈ ದಿನದ ಮುಖ್ಯ ಉದ್ದೇಶ ಎಂದು ಹೇಳಿದರು. ಇಂದು ಸಾವಿರಾರು ಭಕ್ತರಿಗೆ ಸಮಾಜ ಸೇವಕರಿಂದ ಅನ್ನದಾಸೋಹವು ನೆರವೇರಿತು.
ಪೂಜೆ ಸಲ್ಲಿಸಲು ಪಿ ಎನ್ ಕೆ ಕುಟುಂಬದವರು, ಪವನ್ ಕುಮಾರ್, ಕಾಮರಾಜಣ್ಣ, ಮಂಜುನಾಥ್, ದೊಡ್ಡಯ್ಯ, ರಂಗನಾಥ್, ನರಸಿಂಹರಾಜು ಎಲ್ ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗಿಯಾಗಿದ್ದರು.
ವರದಿ .ಪ್ರಸನ್ನ ಕುಮಾರ್ ಎಸ್ .ಕೊರಟಗೆರೆ




















