ಕೊಟ್ಟೂರು : ಪಟ್ಟಣದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಸುಮಾರು 15 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಶಿಷ್ಯ ವರ್ಗದಲ್ಲಿ BBR ಸಾರ್ ಎಂದೇ ಪರಿಚಿತರಾದ ಬಿ.ಬಸವರಾಜ ಅವರಿಗೆ ಬುಧವಾರ ಬೆಳಿಗ್ಗೆ ಅವರ ವಸತಿ ಗೃಹದಲ್ಲಿ ಯುನಿಕ್ ಚಾರಿಟಬಲ್ ಟ್ರಸ್ಟ್ ಸದಸ್ಯರು ಸನ್ಮಾನ ಮಾಡಿ ಗೌರವಿಸಿದರು.
ಯುನಿಕ್ ಚಾರಿಟಬಲ್ ಟ್ರಸ್ಟ್ ಸದಸ್ಯರು ಹಾಗೂ ಅವರ ಪರವಾಗಿ ಇಂದು ಗುರು ಪೂರ್ಣಿಮೆ ಪ್ರಯುಕ್ತ ಯುನಿಕ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಪಿ.ಎಂ. ಈಶ್ವರಯ್ಯ ಹಾಗೂ ಸದಸ್ಯರಾದ ಎಸ್.ಎಂ. ಗುರುಬಸವರಾಜ, ಮತ್ತು ಆರ್. ಎಂ. ಗುರುಬಸವರಾಜ ಇವರು ಹುಟ್ಟಿನಿಂದಲೇ “ಗುರು”ಸ್ಥಾನದಲ್ಲಿರುವುದನ್ನು ಕಂಡ ಗೆಳೆಯರಿಗೆ ಸಹ ಗುರು ಪೂರ್ಣಿಮೆ ಪ್ರಯುಕ್ತ ಶುಭಕೋರಿ ಆರ್ಶೀವಾದ ಪಡೆಯಲಾಯಿತು. ಗುರು ಪರಂಪರೆಯನ್ನ ಈ ಪುಣ್ಯದಿನವಾದ ಇಂದು ಗುರುವೃಂದವನ್ನು ಸ್ಮರಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದು ಭಂಡಾರಿ ರಾಘವೇಂದ್ರ, ಎಸ್. ಸುರೇಶ್, ಮಂಜುನಾಥ ಗಂಗಾವತಿ, ಮಲ್ಲಿಕಾರ್ಜುನ ಬಂಗಾರ ವ್ಯಾಪಾರಿಗಳು ಹೇಳಿದರು.
ವರದಿ : ಕೆ. ಗೋಣೆಪ್ಪ




















