ಮುಂಜಾವಲಿ ಕಂಡೆನೆರೆಡು ಮುದುಡಿದ ಬ್ರಹ್ಮಕಮಲ
ಜೊತೆಯಲಿ ಸೊರಗಿದ್ದ ಮೂಲಂಗಿ ದಂಟಿನ ಘಮಲ
ಸೇರಿಸಲು ಪುಟ್ಟ ತುಂಬೆಹೂಗಳ ಸಿಂಗಾರದಲಿ
ಮೂಡಿತು ವೈಭವದ ನವಚೈತನ್ಯ ಪಕಳೆಗಳಲಿ
ತುಂಬಿತು ಪುನಃಚೇತನ ಸುಲಲಿತ ಚಿತ್ತಾರದಲಿ
ಬಣ್ಣನೆಯ ಉಗಮವಾಯ್ತು ಕಾವ್ಯ ರೂಪದಲಿ
ಬರುತಿದೆ ಸಂತಸದಿ ಸುಮನಗಳ ಮನೆಯಂಗಳಕೆ
ರೂಪಿಸಲು ಹೊಸ ಭಾವಗಳ ಮನದಂಗಳಕೆ
- ಲಲಿತಾ ಕೆ ಆಚಾರ್ ಬೆಂಗಳೂರು




















