ಗಂಗಾವತಿ ತಾಲೂಕಿನ ಡಣಾಪುರ ನಿವಾಸಿಯಾದ ಶಿಕ್ಷಣ ಪ್ರೇಮಿಗಳಾದ ಶರಣಪ್ಪ ಹಾಗೂ ಭೀರಪ್ಪ ನರಸಾಪೂರ ಇವರು ತಮ್ಮ ಮಗಳ ಸಾಧನ ಒಂದನೇ ವರ್ಷದ ಹುಟ್ಟು ಹಬ್ಬದ ಸವಿನೆನಪಿಗಾಗಿ , ಹತ್ತಿರದ ಡಣಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 50 ಮಕ್ಕಳಿಗೆ ಸಮವಸ್ತ್ರ ಉಡುಗರೆಯಾಗಿ ನೀಡುವ ಮೂಲಕ ಸರಳವಾಗಿ ಸಾಧನ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಗ್ರಾಮದಲ್ಲಿ ಹಿರಿಯರು ಮೆಚ್ಚುಗೆ ಪಾತ್ರರಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಬಿ.ಪಕೀರಪ್ಪ , ಮಲ್ಲನಗೌಡ ,ಈ ಚಿದಾನಂದ ,ಪಿ.ಅಯ್ಯಪ್ಪ ,ಟಿ.ನಾಗಪ್ಪ ,ಹೊನ್ನೂರಪ್ಪ ಎಸ್ ಡಿ ಎಂ ಸಿ ಅಧ್ಯಕ್ಷರಾದ ಆನಂದಪ್ಪ ಹಾಗೂ ಹೆಚ್.ಆನಂದ ಶಾಲೆಯ ಮುಖ್ಯ ಶಿಕ್ಷಕರಾದ ಹನುಂತಪ್ಪ ಹುಚ್ಚಿರಪ್ಪ ಅಳವಂಡಿ , ರಾಮನಗೌಡ ಶಾಲೆಯ ಶಿಕ್ಷಕರಾದ ಫಕೀರಪ್ಪ , ಶಿವುಕುಮಾರ ,ಶಣಬಸವ , ಶಿಕ್ಷಕಿಯರಾದ ಶಿಲ್ಪ ,ಪೂಜಾ ಹಾಗೂ ಸರಕಾರಿ ಹಿರಿಯ ,ಪ್ರೌಢ ಶಾಲೆಯ ಶಿಕ್ಷಕ ಶಿಕ್ಷಕಿಯರು ಮುದ್ದು ಮಕ್ಕಳು ಭಾಗಿ ಇದ್ದರು.
- ಕರುನಾಡ ಕಂದ ಸುದ್ದಿ



















