
ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಘಟಕ ಗರಂ
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕಿಟ್ಟ ಗ್ರಾಮದ ಸರ್ವೇ ನಂಬರ್ 127/1 ಈ ಜಾಗವು ಅರಣ್ಯ ಪ್ರದೇಶಕ್ಕೆ ಸೇರಿದ್ದು ಈ ಅರಣ್ಯ ಪ್ರದೇಶದಲ್ಲಿ ಎರಡು ಮೂರು ದಿವಸದ ಹಿಂದೆ ಮಧ್ಯರಾತ್ರಿಯಲ್ಲಿ ಸತತವಾಗಿ ಯಾವುದೋ ಒಂದು ಕಾರ್ಖಾನೆಯಿಂದ ಕೆಮಿಕಲ್ ಅನ್ನು ತಂದು ಅರಣ್ಯ ಪ್ರದೇಶದಲ್ಲಿ ಇರುವ ಒಂದು ದೇವಸ್ಥಾನದ ಹತ್ತಿರ ಬಿಸಾಡುತ್ತಿದ್ದಾರೆ ಇದರಿಂದ ಮಂದಿರಕ್ಕೆ ಹೋಗುವ ಜನರಿಗೆ ಹಾಗೂ ಗ್ರಾಮದ 400 ರಿಂದ 500 ಜನರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅದೇ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುತ್ತಾರೆ ಮತ್ತು ಆ ಕೆಮಿಕಲ್ ನಿಂದಾಗಿ ಅಲ್ಲಿರುವ ಗಿಡಮರಗಳು ಸುಟ್ಟು ಹೋಗಿವೆ ಮುಂಜಾನೆ ಗಾಳಿ ಬೀಸುತ್ತಿರುವ ಸಮಯದಲ್ಲಿ ಕೆಟ್ಟ ದುರ್ವಾಸನೆಯು ಗ್ರಾಮದಲ್ಲಿ ಹರಡುತ್ತಿದೆ ಹಾಗಾಗಿ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ
ಅಲ್ಲಿಂದ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯ ಇದ್ದು ಅಲ್ಲಿ ಸುಮಾರು 100 ರಿಂದ 200 ಬಾಲಕಿಯರು ಇದ್ದಾರೆ.
ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಮಾನ್ಯ ತಹಶೀಲ್ದಾರ್ ಅವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ ಹಾಗೂ ಪ್ರಾದೇಶಿಕ ಅರಣ್ಯ ಅಧಿಕಾರಿಗಳಿಗೆ ಕೂಡ ಮನವಿಯನ್ನು ಸಲ್ಲಿಸಿದ್ದೇವೆ ಇದನ್ನು ಅತೀ ಶೀಘ್ರವಾಗಿ ಅಧಿಕಾರಿಗಳು ಸ್ಥಳವನ್ನು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಸುರೇಶ್ ಜಮ್ಮು ಉಪಾಧ್ಯಕ್ಷರಾದ ಸುನಿಲ್ ಕೋರೆ ಲಕ್ಷ್ಮಣ್ ಸೂರ್ಯವಂಶಿ ಮತ್ತಿತರರು ಇದ್ದರು.
ವರದಿ ಶ್ರೀನಿವಾಸ ಬಿರಾದಾರ



















