ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಯಸ್ಸಿನ ದೃಢೀಕರಣ ಪ್ರಮಾಣಪತ್ರ ನೀಡಲು ಹಿರಿಯ ನಾಗರಿಕರ ಬಳಿ 100/- ರೂ. ಗಳನ್ನು ಪಡೆಯಲಾಗುತ್ತಿದೆ. ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆ (ಎಸ್.ಎಸ್.ವೈ.) ಮಾಸಾಶನವು ಕಳೆದ ಆರು ತಿಂಗಳಿಂದ ಬಂದಿರುವುದಿಲ್ಲ. ಅವರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮಾನ್ಯ ತಹಸೀಲ್ದಾರರು (ಬಸವಕಲ್ಯಾಣ) ವೈದ್ಯಕೀಯ ದೃಢೀಕರಣ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ.
ನಾನು ಮುಖ್ಯ ವೈದ್ಯಾಧಿಕಾರಿಗಳನ್ನು (CMO, ಬಸವಕಲ್ಯಾಣ) ರವರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ, 100/- ರೂ.ಗಳು ಸರ್ಕಾರದ ಶುಲ್ಕವಾಗಿರುತ್ತದೆ. ಹಿರಿಯ ನಾಗರಿಕರು ಕಡುಬಡವರಾಗಿದ್ದರೆ ನೀವೇ 100/-ರೂಪಾಯಿ ಶುಲ್ಕ ಭರಿಸಿ’ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಹಾಗೂ ತಾಲೂಕು ವೈದ್ಯಾಧಿಕಾರಿಗಳು (ಬಸವಕಲ್ಯಾಣ) ರವರ ಕಚೇರಿಗೆ ಖುದ್ದಾಗಿ ಭೇಟಿ ನೀಡಿದಾಗ, ಅವರು ಕಚೇರಿಯಲ್ಲಿ ಇರಲಿಲ್ಲ. ನಂತರ ಫೋನ್ ಮುಖಾಂತರ ಮಾತನಾಡಿದಾಗ, ಅವರೂ ಸಹ ‘ಇದು ಸರ್ಕಾರದ ಆದೇಶವಾಗಿದೆ’ ಎಂದು ಹೇಳಿರುತ್ತಾರೆ.
ಆದ್ದರಿಂದ ತಾವುಗಳು ಹಿರಿಯ ನಾಗರಿಕರ ಬಳಿ 100/- ರೂಪಾಯಿ ಅನಗತ್ಯ ಶುಲ್ಕ ಪಡೆಯುವುದನ್ನು ತಕ್ಷಣವೇ ತಡೆಹಿಡಿಯಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.
ಒಂದು ವೇಳೆ ಇದನ್ನು ತಡೆಹಿಡಿಯದಿದ್ದಲ್ಲಿ, ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಅಶೋಕ ಬಿ. ಮಂಠಾಳಕರ ರವರು ಜಿಲ್ಲಾ ವೈದ್ಯಾಧಿಕಾರಿಗಳು ಬೀದರ ರವರಿಗೆ ಪತ್ರದ ಮುಖಾಂತರ ಮನವಿ ಮಾಡಿಕೊಂಡಿದ್ದೇನೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ
ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಂದ ವೈದ್ಯಕೀಯ ಪ್ರಮಾಣ ಪತ್ರ ನೀಡಲು ಹಣ ತೆಗೆದುಕೊಳ್ಳುತ್ತಿದ್ದಾರೆ :ಎಂದು ಬಿ.ಎಸ್.ಪಿ. ರಾಜ್ಯ ಕಾರ್ಯದರ್ಶಿಯಿಂದ ಜಿಲ್ಲಾ ವೈದಾಧಿಕಾರಿಗಳಿಗೆ ದೂರು
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಯಸ್ಸಿನ ದೃಢೀಕರಣ ಪ್ರಮಾಣಪತ್ರ ನೀಡಲು ಹಿರಿಯ ನಾಗರಿಕರ ಬಳಿ 100/- ರೂ. ಗಳನ್ನು ಪಡೆಯಲಾಗುತ್ತಿದೆ. ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷಾ ಯೋಜನೆ (ಎಸ್.ಎಸ್.ವೈ.) ಮಾಸಾಶನವು ಕಳೆದ ಆರು ತಿಂಗಳಿಂದ ಬಂದಿರುವುದಿಲ್ಲ. ಅವರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮಾನ್ಯ ತಹಸೀಲ್ದಾರರು (ಬಸವಕಲ್ಯಾಣ) ವೈದ್ಯಕೀಯ ದೃಢೀಕರಣ ಪ್ರಮಾಣಪತ್ರವನ್ನು ಕೇಳುತ್ತಿದ್ದಾರೆ.
ನಾನು ಮುಖ್ಯ ವೈದ್ಯಾಧಿಕಾರಿಗಳನ್ನು (CMO, ಬಸವಕಲ್ಯಾಣ) ರವರಿಗೆ ದೂರವಾಣಿ ಮೂಲಕ ವಿಚಾರಿಸಿದಾಗ, 100/- ರೂ.ಗಳು ಸರ್ಕಾರದ ಶುಲ್ಕವಾಗಿರುತ್ತದೆ. ಹಿರಿಯ ನಾಗರಿಕರು ಕಡುಬಡವರಾಗಿದ್ದರೆ ನೀವೇ 100/-ರೂಪಾಯಿ ಶುಲ್ಕ ಭರಿಸಿ’ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಹಾಗೂ ತಾಲೂಕು ವೈದ್ಯಾಧಿಕಾರಿಗಳು (ಬಸವಕಲ್ಯಾಣ) ರವರ ಕಚೇರಿಗೆ ಖುದ್ದಾಗಿ ಭೇಟಿ ನೀಡಿದಾಗ, ಅವರು ಕಚೇರಿಯಲ್ಲಿ ಇರಲಿಲ್ಲ. ನಂತರ ಫೋನ್ ಮುಖಾಂತರ ಮಾತನಾಡಿದಾಗ, ಅವರೂ ಸಹ ‘ಇದು ಸರ್ಕಾರದ ಆದೇಶವಾಗಿದೆ’ ಎಂದು ಹೇಳಿರುತ್ತಾರೆ.
ಆದ್ದರಿಂದ ತಾವುಗಳು ಹಿರಿಯ ನಾಗರಿಕರ ಬಳಿ 100/- ರೂಪಾಯಿ ಅನಗತ್ಯ ಶುಲ್ಕ ಪಡೆಯುವುದನ್ನು ತಕ್ಷಣವೇ ತಡೆಹಿಡಿಯಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ.
ಒಂದು ವೇಳೆ ಇದನ್ನು ತಡೆಹಿಡಿಯದಿದ್ದಲ್ಲಿ, ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಅಶೋಕ ಬಿ. ಮಂಠಾಳಕರ ರವರು ಜಿಲ್ಲಾ ವೈದ್ಯಾಧಿಕಾರಿಗಳು ಬೀದರ ರವರಿಗೆ ಪತ್ರದ ಮುಖಾಂತರ ಮನವಿ ಮಾಡಿಕೊಂಡಿದ್ದೇನೆ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ




















