ತೆಕ್ಕಲಕೋಟೆ: ಪಟ್ಟಣದ ಪ್ರಾಗೈತಿಹಾಸಿಕ ಕಾಲದ ಬೆಟ್ಟಸಾಲುಗಳ ಡೆಂಕ್ಲಮ್ಮ ಗುಡ್ಡದಲ್ಲಿ ಕೆಲದಿನಗಳಿಂದ ಚಿರತೆ ಕಾಣಿಸಿಕೊಂಡಿದೆ ಎಂದು ಕುರಿಗಾಹಿಗಳು ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯು ಚಿರತೆಯ ಸೆರೆಗೆ ಬೋನು ಇಟ್ಟಿದ್ದಾರೆ.
ಈ ಕುರಿತು ಚಿರತೆ ರಸ್ತೆ ಬಳಿ ಕಾಣಿಸಿಕೊಂಡ ಚಿತ್ರ ವ್ಯಾಪಕವಾಗಿ ಹರಡಿದೆ. ಅಲ್ಲದೆ ಯುವಕರು ಎಚ್ಚರಿಕೆ ಸಂದೇಶವನ್ನು ವ್ಯಾಟ್ಸ್ಅಪ್ನಲ್ಲಿ ಕಳುಹಿಸಿ ಸಂಜೆ ಅಥವಾ ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸಬಾರದು ಎಂದು ವಿನಂತಿಸಿದ್ದಾರೆ.
‘ಚಿರತೆ ಕಾಣಿಸಿಕೊಂಡ ಸ್ಥಳ ಪರಿಶೀಲಿಸಿದ್ದು, ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿವೆ. ಇದರಿಂದಾಗಿ ಬೋನು ಅಳವಡಿಸಿ, ಪ್ರಾಣಿಯ ಚಲನವಲನ ಕುರಿತು ಮಾಹಿತಿ ಸಂಗ್ರಹಿಸುತ್ತಿರುವುದಾಗಿ. ಇಲ್ಲಿ ಕತ್ತೆಕಿರುಬ (ಹೈನಾ) ಇರುವ ಸಾಧ್ಯತೆ ಹೆಚ್ಚಿದ್ದು, ಸ್ಥಳ ಪರಿಶೀಲಿಸಿದಾಗ ಹೆಜ್ಜೆ ಗುರುತು ಪತ್ತೆಯಾಗಿವೆ ಎಂದು ಸಿರುಗುಪ್ಪ ತಾಲ್ಲೂಕು ವಲಯ ಅರಣ್ಯಾಧಿಕಾರಿ ಕಾಂತರಾಜು ತಿಳಿಸಿದ್ದಾರೆ.
ವರದಿ : ಮಸೀದಿ ,ಅಬ್ದುಲ್ ಗೌಸ್, ಸಿರುಗುಪ್ಪ




















