ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕರಕಿಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಗ್ರಾಮದ ಉದ್ದಾರಕ್ಕೆ ಬಿಡುಗಡೆಯಾದ ಅನುದಾನ ಹಾಗೂ ಗ್ರಾಮದ ತೆರಿಗೆ ಹಣ ದುರ್ಬಳಕೆಯಾಗಿದ್ದು ಈ ವಿಷಯದ ಕುರಿತು ಬಿಳವಾರ್ ಹೋಬಳಿ ಘಟಕದ ದಲಿತ ಸೇನಾ ಸಂಘಟನೆ ವತಿಯಿಂದ ಯಡ್ರಾಮಿ ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ ಎಂದು ದಲಿತ ಸೇನಾ ಸಂಘಟನೆಯ ಹೋರಾಟಗಾರರಾದ ಮೌನೇಶ್ ನಂದಿಹಳ್ಳಿ ಹಾಗೂ ದಲಿತ ಸೇನಾ ಸಂಘಟನೆಯಾ ಬಿಳವಾರ್ ಹೋಬಳಿ ಕಾರ್ಯದರ್ಶಿ ಚಂದ್ರಶೇಖರ್ ಬಳಬಟ್ಟಿ ಹಾಗೂ ಪರಶುರಾಮ್ ದಲಿತ ಸೇನಾ ಬಿಳವಾರ್ ಹೋಬಳಿ ಅಧ್ಯಕ್ಷರು ಹಾಗೂ ಸುನಿಲ್ ಜಮಾದಾರ್ ನಂದಿಹಳ್ಳಿಯವರು ಈ ಅವ್ಯವಸ್ಥೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೂಡ್ಲೇ ತನಿಖೆ ನಡೆಸುವಂತೆ ಅಗ್ರಹಿಸಿದ್ದಾರೆ ಅದೇ ರೀತಿಯಾಗಿ ಕರಕಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ರಾಜಶೇಖರ್ ಕಂಬಾರ್ ಅವರು ಸರ್ಕಾರಿ ಅನುದಾನವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಕೂಡಲೇ ಒಂದು ವಾರದೊಳಗೆ ತನಿಖೆ ನಡೆಸಬೇಕು ಒಂದು ವೇಳೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ವಹಿಸಿದರೆ ಸೂಕ್ತ ದಾಖಲಾತಿ ಸಮೇತ ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರನ್ನು ದಾಖಲಿಸಲಾಗುವದು ಎಂದು ಮೌನೇಶ್ ಬಡಿಗೇರ್ ನಂದಿಹಳ್ಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















