ಕೃಷ್ಣ ಹುಟ್ಟಿದ್ದು ಜೈಲಿನಲಿ
ದೇವಕಿ ಇರುವಾಗ ಸೆರೆಯಲಿ
ಕೃಷ್ಣ ಕಳ್ಳನಾಗಿದ್ದು ಅಸಹಜ ಅಲ್ಲ ಬಿಡಿ
ಅಂತೆಯೇ ಕೃಷ್ಣನ ಸಂತತಿ, ಇನ್ನೂ
ಜೀವಂತವಿದೆ ನೋಡಿ!
ಇಂದು ಕೃಷ್ಣನ ಜನುಮದಿನ,
ಇದನ್ನು ಹೀಗೂ ಅನಬಹುದಲ್ಲವೇ,
ಇಂದು ಕಳ್ಳ ಜನ್ಮಾಷ್ಟಮಿ!
ತಾಯಿ-ಮಕ್ಕಳು.
ಮಕ್ಕಳನ್ನು ಹೆತ್ತ ತಾಯಿ
ತನ್ನೊಡಲ ಕುಡಿಗಳನು
ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿ ಸಲಹುತ್ತಾಳೆ,ಬೆಳೆದ ಮಕ್ಕಳೋ, ಅವಳ ಪ್ರಾಣವೇ ಹೋಗುವ ಹಾಗೆ
ವರ್ತಿಸುತ್ತಾರೆ! ಈ ಲೋಕವೇ ಹೀಗೆ!
— ಶಿವಪ್ರಸಾದ್ ಹಾದಿಮನಿ
ಕೊಪ್ಪಳ. ✍🏻




















