ತೋಳ್ಬಲದಿ
ನೂಕುತಿರುವೆ ಬಾಳ್ನೊಗವ
ಹರುಕು ಬಟ್ಟೆ
ದೂಳೇ ಮೇಲೊದಿಕೆ..!
ಆದರೂ….
ನಿತ್ಯದ ನೆಮ್ಮದಿಗೆ
ನಂಜಿಲ್ಲ.
ಬಾಳ ನಂಟಲಿ
ಸಾಗುವ ದಾರಿ ಮಾತ್ರ
ಕಣ್ಣಿದಿರು ಕಟ್ಟಿದೆ.
ಹಗಲು-ಇರುಳೆನ್ನದೆ,
ಅನ್ಯರಿಗಂಜದೆ
ಒಂದೊತ್ತಿನ
ಗಂಜಿಗಾದರೂ
ರಟ್ಟೆ ಮುರಿದು,
ದುಡಿದು ತಿನ್ನುವೆ.
ಬೇಡುವ ಕಾಯ
ಬಾರದಿರಲಿ…
- ಡಾ. ಸುರೇಶ್.ಎಸ್ ವಡಗಲಪುರ.




















