ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ರಾಜಾ ರೋಷವಾಗಿ ಓಡಾಡುತ್ತಿರುವ ಚಿರತೆ ಸಂಬಂಧಪಟ್ಟಂತೆ ಅಧಿಕಾರಿಗಳ ಗಮನಕ್ಕೆ ವಿಷಯ ತಿಳಿಯಪಡಿಸಿದರೂ ಕಂಡೂ ಕಾಣದಂತೆ ಕುಳಿತ ಅಧಿಕಾರಿಗಳು ಇದರಿಂದ ಭಯಗೊಂಡ ಗ್ರಾಮಸ್ಥರು ಮನೆ ಬಿಟ್ಟು ಹೊರಗೆ ಬರಲು ಸಹ ಆಗುತ್ತಿಲ್ಲ ದನ ಕರ ಗಳನ್ನು ಸಹ ಹೊಲಕ್ಕೆ ತೆಗೆದುಕೊಂಡು ಹೋಗುವುದಾಗಲಿ, ಮನೆ ಬಿಟ್ಟು ಹೊರಗೆ ಕಟ್ಟುವುದಾಗಲಿ ಮಾಡುವುದು ಸಹ ಕಷ್ಟಕರ ವಿಷಯವಾಗಿದೆ ಮನೆ ಮುಂದಿರುವ ನಾಯಿಗಳನ್ನು ಸಹ ಪ್ರತಿ ದಿನ ಮುರಿದು ತಿನ್ನುತ್ತಿದ್ದು ಆದ್ದರಿಂದ ಗ್ರಾಮಸ್ಥರು ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳ ಬೇಜವಾಬ್ದಾರಿ ತನವೇ ಕಾರಣ ಎಂದು ದೂರುತ್ತಿದ್ದಾರೆ.
ವರದಿ ಮಂಜು ಎಂ.ಚಿಕ್ಕಣ್ಣವರ




















