ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಾಂತಿ ಪ್ರೀತಿಯಿಂದ ರಾಜಕೀಯ ಮಾಡುತ್ತೇನೆ: ಯಶವಂತರಾಯಗೌಡ ಪಾಟೀಲ್

ಇಂಡಿ: ಕಾಂಗ್ರೆಸ್ ಈ ಬಾರಿ ಸಂಪೂರ್ಣ ಬಹುಮತದೊಡನೆ ಸರ್ಕಾರ ರಚಿಸಲಿದೆ ಕರ್ನಾಟಕದ ಚುನಾವಣೆಯ ಫಲಿತಾಂಶವು ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರಿಸಲಿದೆ ಕಳೆದ ಎರಡು ಅವಧಿಗೆ ತಾವು ನನಗೆ ಆಶೀರ್ವಾದ ಮಾಡಿ ಅಧಿಕಾರದ ಶಕ್ತಿ ನೀಡಿದ್ದೀರಿ ನಿಮ್ಮ ಋುಣ ಮರೆವುದಿಲ್ಲ ಇದೊಂದು ಬಾರಿ ನನಗೆ ಹಿ೦ದಿನಂತೆ ಮತ ನೀಡಿ ಆಶೀರ್ವಾದ ಮಾಡ ಬೇಕು ಎಂದು ತಮ್ಮ ಮನೆಯ ಬಾಗಿಲಿಗೆ ಬಂದಿರುವೆ ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಕಾಂಗ್ರೆಸ್‌ ಅಭ್ಯರ್ಥಿ ಯಶವಂತರಾಯ ಗೌಡ ಪಾಟೀಲ ಹೇಳಿದರು.

ತಾಲೂಕಿನ ಮಾವಿನಹಳ್ಳಿ ಗ್ರಾಮಸ್ಥರು ವಿವಿಧ ಸಮುದಾಯಗಳಿಂದ ಯಶವಂತ ರಾಯಗೌಡ ಪಾಟೀಲರಿಗೆ ಸನ್ಮಾನ ಮಾಡಲಾಗಿತ್ತು,ಗ್ರಾಮದಲ್ಲಿ ಮತಯಾಚನೆ ಸಭೆಯಲ್ಲಿ ಮಾತನಾ ಡಿದ ಅವರು, ತಾವು ನೀಡಿದ ಶಕ್ತಿಯಿಂದ ಇಂಡಿ ಮತಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ನಿಮ್ಮ ಮುಂದೆ ಇದ್ದು,ಪ್ರತಿಯೊಂದು ಸಮುದಾಯದ ಜೊತೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ರಾಜಕಾರಣ ಮಾಡಿದ್ದೇನೆ ಸರ್ವ ಜನಾಂಗವನ್ನು ಪ್ರೀತಿಸುತ್ತಾ ಅವರ ವಿಶ್ವಾಸಗಳಿಸಿದ್ದೇನೆ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತನೀಡಿ ಎಂದು ಹೇಳಿದರು.

ನಾನು 30 ವರ್ಷಗಳ ರಾಜಕೀಯದಲ್ಲಿ ಸರ್ವ ಜನಾಂಗವನ್ನು ಪ್ರೀತಿಸುತ್ತ, ಪ್ರತಿಯೊಂದು ಸಮುದಾಯಕ್ಕೆ ಸ್ಥಾನಮಾನಗಳನ್ನು ನೀಡಿದ್ದೇನೆ. ಕ್ಷೇತ್ರದ ಜನತೆ ನನಗೆ ಪ್ರೀತಿಯಿಂದ ಕಾಣುತ್ತಿದ್ದಾರೆ ಎಂದರು.

ಈ ಒಂದು ಸಂದರ್ಭದಲ್ಲಿ ಮಲ್ಕಪ್ಪ ಜಂಗಲಿಗಿ, ಜಾವೀದ್ ಮೋಮಿನ, ಮೈಬು ಅರಬ್ , ಪ್ರಭು ಹೊಸಮನಿ, ಭೀಮರಾಯ ಕಾಂಬಳೆ , ಸುಖಮಲ್ಲ ಬಾರಣಿ , ಗಂಗಾಧರ್ ಕಾಂಬಳೆ, ಶ್ರೀಮಂತ ಕಾಂಬಳೆ , ರಾಮಣ್ಣ ಬಾರಣಿ , ಗಂಗಾಧರ ನಾಟಿಕರ್, ಶಂಕರ್ ನಾಟಿಕಾರ್ , ಖಾಜಪ್ಪ ಕಾಂಬಳೆ, ಸಂತೋಷ ದಶ್ವಂತ್ , ರಾಹುಲ್ ಉತರೆ, ಶಿವಾನಂದ ಕಾಂಬಳೆ, ರಾಮಚಂದ್ರ ಕಾಂಬಳೆ, ಸುಭಾಷ್ ಕಾಂಬಳೆ,ರಾಜಕುಮಾರ್ ಬಾರಣಿ ,ಆಶಿಪ್ ಶೇಕ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

ವರದಿ-ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ