ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವರದಿಗಾರನ ಮೇಲೆ ಹಲ್ಲೆಗೆ ಯತ್ನ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿಯ ಹುಣಸಘಟ್ಟ ಗ್ರಾಮದ ಬೂತ್ ನಂಬರ್ 243 ಮತ್ತು 244 ರ ಸಮೀಪ ವಿಜಯ ಕರ್ನಾಟಕ ವರದಿಗಾರ ಸುದ್ದಿ ಮಾಡಲೆಂದು ಬುಧವಾರ ಬೆಳಗ್ಗೆ ಬೂತ್ ಹೊರಬಾಗದಲ್ಲಿ ವಿಡಿಯೋ ಮತ್ತು ಫೋಟೋ ತೆಗೆಯಲು ಹೋದಾಗ ಇಲ್ಲಿನ ಸಿಆರ್ ಪಿ ಎಫ಼್ ಕಮಾಂಡೋ ಏಕಾಏಕಿ ವರದಿಗಾರನ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದು,ವರದಿಗಾರನು ವಿಡಿಯೋ ಮತ್ತು ಫೋಟೋ ತೆಗೆಯಲು ಬಳಸಿದಂತಹ ಮೊಬೈಲ್ ಅನ್ನು ಸಹ ಕಸೆದುಕೊಂಡು ಅದರಲ್ಲಿದ್ದ ಫೋಟೋ ಮತ್ತು ವಿಡಿಯೋವನ್ನು ಸಹ ಡಿಲೀಟ್ ಮಾಡಿರುತ್ತಾರೆ.

ಈ ಘಟನೆ ನಡೆಯಲು ಕಾರಣ ತಾಲೂಕು ಚುನಾವಣಾ ಅಧಿಕಾರಿಗಳು ಯಾವುದೇ ಮಾಧ್ಯಮ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದಿಂದ ಗುರುತಿನ ಚೀಟಿ ನೀಡದೆ ಇರುವುದು ಈ ಘಟನೆಗೆ ಮುಖ್ಯ ಕಾರಣವಾಗಿದ್ದು.

ಇದನ್ನು ಖಂಡಿಸಿ ಹೊನ್ನಾಳಿ ಕಾರ್ಯನಿರತ ಪತ್ರಕರ್ತರ ಸಂಘ ಗ್ರಾಮದ ಮುಂದೆ ಅರಬೆತ್ತಲೆಯಾಗಿ ಈ ಘಟನೆಯನ್ನು ಪ್ರತಿಭಟಿಸಿತು.ಈ ಸಂದರ್ಭದಲ್ಲಿ

ಹೊನ್ನಾಳಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೋರಿ ಯೋಗೇಶ್ ಕುಳಗಟ್ಟೆ
ಉಪಾಧ್ಯಕ್ಷರಾದ ಹರೀಶ್ ಆರ್ ಸಾಗೋನಿ,
ಮಾಜಿ ಅಧ್ಯಕ್ಷರಾದ ಮೃತ್ಯುಂಜಯ ಪಾಟೀಲ್,
ಪತ್ರಕರ್ತರಾದ ರಮೇಶ್ ಮಡಿವಾಳ್,
ಹಾಲೇಶ್ ಉಪಸ್ಥಿತರಿದ್ದರು.

-ಪ್ರಭಾಕರ್ ಡಿ.ಎಮ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ