ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭಿವೃದ್ಧಿಯ ಮಹಾರಾಣಿಗೆ ಮಣೆ ಹಾಕಿದ ಮತದಾರ

ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಕಳೆದ ಎರಡು ತಿಂಗಳಿಂದ ಹಾವು ಏಣಿ ಆಟ ನಡೆಸಿದ್ದ ಗೋಕಾಕ ಸಾಹುಕಾರನ ತಂತ್ರಗಳನ್ನು ನುಚ್ಚುನೂರು ಮಾಡಿ ಕೊನೆಗೂ ಸಫಲತೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗುವಲ್ಲಿ ಶಾಸಕಿ ಶ್ರೀಮತಿ ಲಕ್ಷ್ಮೀ ಅಕ್ಕಾ ಹೆಬ್ಬಾಳಕರ ಗೆಲ್ಲೊದು ಪಕ್ಕಾ ಎಂಬ ಗ್ರಾಮೀಣ ಭಾಗದ ನಾಣ್ಣುಡಿ ಸಾಕಾರಗೊಂಡಿದೆ ಸಹಜವಾಗಿ ಗೆಲುವು ಸಾಧಿಸುವ ಇರಾದೆ ಕ್ಷೇತ್ರದಲ್ಲಿ ಮೊದಲಿನಿಂದಲೂ ಚಾಲನೆಯಲ್ಲಿ ಇದ್ದರೂ ಕೆಲವು ಗೊಂದಲಗಳ ಸರಮಾಲೆಯನ್ನೇ ಕ್ಷೇತ್ರದಲ್ಲಿ ಗಾಳಿಗೆ ತೂರಿ ಮುನ್ನಡೆ ಸಾಧಿಸುವ ತಂತ್ರಗಾರಿಕೆ ಜನರ ಅಭಿಮಾನದ ರಭಸಕ್ಕೆ ಐವತ್ತು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆದುಕೊಂಡು ಅಭಿವೃದ್ಧಿಯ ಮಹಾರಾಣಿ ಎಂದೇ ಪ್ರತಿಬಿಂಬಿತವಾಗಿರುವ ಹಾಲಿ ಶಾಸಕಿ ಶ್ರೀಮತಿ ಲಕ್ಷ್ಮೀ ಅಕ್ಕಾ ಹೆಬ್ಬಾಳಕರ ಅವರ ವ್ಯಕ್ತಿತ್ವಕ್ಕೆ ಮಗದೊಂದು ಗೆಲುವು ರಾಜ್ಯ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಕೀರ್ತಿ ಪತಾಕೆಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಇದರ ಜೊತೆಗೆ ಕ್ಷೇತ್ರದಲ್ಲಿರುವ ಅಪಾರವಾದ ಪ್ರೀತಿ,ನಂಬಿಕೆ,ವಿಶ್ವಾಸವನ್ನು ಉಳಿಸಿಕೊಂಡು ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ಉತ್ತುಂಗದ ಶಿಖರ ಮುಟ್ಟುವಲ್ಲಿ ಅನುಮಾನವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ ಜೊತೆಗೆ ಕ್ಷೇತ್ರದಲ್ಲಿರುವ ಆತಂಕ ಯಾರು ವಿಜಯಿಯಾಗುತ್ತಾರೆಂಬ ಅನುಮಾನ ದೂರವಾಗಿ ಜನರಿಗೆ ಬೇಕಾದ ನಾಯಕತ್ವ ಸಿಕ್ಕಿರುವುದು ಸಂತಸದ ವಾತಾವರಣ ನಿರ್ಮಾಣವಾಗಿದೆ ಕಾರಣ ಹಲವು ತಿಂಗಳುಗಳಿಂದ ಆತಂಕ ಮನೆ ಮಾಡಿದ್ದ ನೋವಿನಿಂದ ಮುಕ್ತಿಯಾಗಿ ಜನರ ಸಂಭ್ರಮ ಮುಗಿಲು ಮುಟ್ಟಿದೆ ಕಾರಣ ಬಹಳಷ್ಟು ಹತ್ತಿರದಿಂದ ಜನರ ಸಹಕಾರ ಹಾಗೂ ಸಮಸ್ಯೆಗೆ ಪರಿಹಾರವನ್ನು ನೀಡುವ ಔಷಧಿಯಾಗಿ ಹಾಲಿ ಶಾಸಕರ ಪುನರಾಯ್ಕೆ ಕ್ಷೇತ್ರದ ಹಿತದೃಷ್ಟಿಯಿಂದ ನೂರಾನೆಬಲ ಬಂದಂತಾಗಿದೆ ಎಂಬುವುದು ಕ್ಷೇತ್ರದಲ್ಲಿನ ಜನರ ಅಭಿಪ್ರಾಯವಾಗಿದೆ ಹಾಗೂ ಸಚಿವೆಯಾಗಿ ಇನ್ನಷ್ಟು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಶಾಸಕಿಯರ ಹೆಸರು ಮಗದಷ್ಟು ಪ್ರಜ್ವಲಿಸುವ ಸೌಭಾಗ್ಯ ಅವರದಾಗಲೆಂಬ ಆಶಯ ಕ್ಷೇತ್ರದಲ್ಲಿನ ಜನರ ಅಭಿಪ್ರಾಯವಾಗಿದೆ ಇನ್ನಷ್ಟು ಅವರ ಕಾರ್ಯಗಳು ನಾಡಿಗೆ ಕ್ಷೇತ್ರಕ್ಕೆ ಜೀವ ತುಂಬಲೆಂಬುವುದು ಜನರ ಆಶಯವಾಗಿದೆ.
ವರದಿಗಾರ ದಿನೇಶಕುಮಾರ ಅಜಮೇರಾ ಬೆಳಗಾವಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ