ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಂಧನೂರು ಜಿಲ್ಲಾ ಕೇಂದ್ರವಾಗಿಸಲು ಶ್ರಮಿಸುವೆ ಎಂದು ಘೋಷಿಸಿರುವ ನೂತನ ಶಾಸಕರಿಗೆ ಅಭಿನಂದನೆಗಳು:ವನಸಿರಿ ಅಮರೇಗೌಡ

ರಾಯಚೂರು:ಕರ್ನಾಟಕ ರಾಜ್ಯದ 2023ರ ವಿಧಾನ ಸಭಾ ಚುನಾವಣೆಯಲ್ಲಿ ಸಿಂಧನೂರಿನ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀ ಹಂಪನಗೌಡ ಬಾದರ್ಲಿಯವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೃದಯ ಪೂರ್ವಕ ಅಭಿನಂದನೆಗಳು ಮತ್ತು ಸಿಂಧನೂರು ಅತ್ಯಂತ ಅಭಿವೃದ್ಧಿ ಹೊಂದುತ್ತಿರುವ ತಾಲೂಕು ಇದು ಏಷ್ಯಾ ಖಂಡದಲ್ಲೇ ಹೆಸರುವಾಸಿಯಾಗಿದೆ.ಹೆಚ್ಚು ಜನರು ವಾಸಿಸುವ ತಾಲೂಕಾಗಿದೆ ಆದರೆ ಜನರು ಜಿಲ್ಲಾ ಕೇಂದ್ರದ ಕಾರ್ಯಗಳಿಗೆ ಹೋಗಬೇಕಾದರೆ ಸುಮಾರು ನೂರಕ್ಕೂ ಹೆಚ್ಚು ಕಿಲೋಮೀಟರ್ ದೂರದ ರಾಯಚೂರಿಗೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.ಸಿಂಧನೂರನ್ನೇ ಜಿಲ್ಲಾಕೇಂದ್ರವನ್ನಾಗಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಇದರ ಬಗ್ಗೆ ಸಾರ್ವಜನಿಕರು ಕೂಡಾ ಹಲವಾರು ವರ್ಷಗಳಿಂದ ಸಿಂಧನೂರು ಜಿಲ್ಲಾ ಕೇಂದ್ರದ ಬಗ್ಗೆ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಇದೇ ವೇಳೆ ಚುನಾವಣಾ ಆಯೋಗ 2023ರ ಚುನಾವಣೆ ಘೋಷಿಸಿದ ಕೂಡಲೇ ಸಿಂಧನೂರಿನ ಅಭ್ಯರ್ಥಿಯಾದ ಶ್ರೀ ಹಂಪನಗೌಡ ಬಾದರ್ಲಿಯವರು ಕೂಡಾ ಸಿಂಧನೂರು ಜಿಲ್ಲಾ ಕೇಂದ್ರ ಮಾಡುವುದರ ಬಗ್ಗೆ ನಾನು ಶ್ರಮಿಸುವೆ ಎಂದು ತಿಳಿಸಿದ್ದರು ಸದ್ಯ ಇದೀಗ ಹಂಪನಗೌಡ ಬಾದರ್ಲಿ ಅವರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ ಆಯ್ಕೆಯಾದ ತಕ್ಷಣ ಮತದಾರರನ್ನು ಉದ್ದೇಶಿಸಿ ನಾನು ನಿಮಗೆ ನೀಡಿದ ಸಿಂಧನೂರು ಜಿಲ್ಲಾ ಕೇಂದ್ರದ ಮಾತನ್ನು ನಡೆಸಿಕೊಡಲು ಆದ್ಯತೆ ನೀಡುತ್ತೇನೆ ಮತ್ತು ಸಿಂಧನೂರು ಜಿಲ್ಲಾ ಕೇಂದ್ರವಾಗಿ ಮಾಡಲು ಶ್ರಮಿಸುವೇ ಎಂದಿದ್ದಾರೆ ಶಾಸಕರಾಗಿ ಮೊಟ್ಟಮೊದಲ ಬಾರಿಗೆ ಸಿಂಧನೂರು ಜಿಲ್ಲಾ ಕೇಂದ್ರ ಸ್ಥಾಪನೆ ಮಾಡುವುದರ ಬಗ್ಗೆ ಮಾತನಾಡಿದ ಮೊಟ್ಟಮೊದಲ ಮೊದಲ ಶಾಸಕರು ಹಂಪನಗೌಡ ಬಾದರ್ಲಿಯವರು ಅವರು ಅವರಿಗೆ ನಮ್ಮ ವನಸಿರಿ ಫೌಂಡೇಶನ್ ವತಿಯಿಂದ ಅಭಿನಂದನೆಗಳು ಮತ್ತು ಹೃದಯ ಪೂರ್ವಕ ಧನ್ಯವಾದಗಳು ಎಂದು ಅಮರೇಗೌಡ ಮಲ್ಲಾಪೂರ ಅವರು ತಮ್ಮ ಕಛೇರಿಯಲ್ಲಿ ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ