ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

❤️ಓ ನನ್ನ ನಲ್ಲೆ❤️

ಓ ನನ್ನ ನಲ್ಲೆ
ನೀನು ರಸ ತುಂಬಿದ ಕಬ್ಬಿನ ಜಲ್ಲೆ
ನಾನು ಬರುವೆ ಅಲ್ಲೇ ನಿಲ್ಲೆ
ನೀನು ಎಡವಿದರು ನಾನು ಸಹಿಸುವುದಿಲ್ಲೆ

ಓ ನನ್ನ ನಲ್ಲೆ
ನನ್ನ ಮನಸೆಲ್ಲ ನಿನ್ನಲ್ಲೇ
ಹಕ್ಕಿಯಂತೆ ಹಾರಾಡುವ ಬಾನಲ್ಲಿ
ಜಗದ ಜಂಜಾಟವ ಮರೆತು ನಾವಿಬ್ಬರೂ
ನಲಿಯೋಣ ಬಾರೆ ಪ್ರಕೃತಿಯ ಮಡಿಲಲ್ಲಿ

ಓ ನನ್ನ ನಲ್ಲೆ
ನಾನಿಟ್ಟೆ ಪ್ರಾಣ ನಿನ್ನಲ್ಲೇ
ನೀನೊಂದು ಕುಸುಮಕೋಮಲೆ
ಚಂದ್ರನಿಗಿಂತ ತಂಪು
ಮಲ್ಲಿಗೆಗಿಂತ ಕಂಪು
ನೀನೆ ನನ್ನ ಬೆಳದಿಂಗಳ ಬಾಲೆ

ಓ ನನ್ನ ನಲ್ಲೆ
ಮನಸಲ್ಲಿ ಮನೆ ಮಾಡಿ
ಕನಸಲ್ಲಿ ಗುಡಿ ಕಟ್ಟಿ
ಕಾಯುತ್ತಿರುವೆ ನಿನ್ನ ಸೇರಲು
ನಿನ್ನ ಜೊತೆಯಲ್ಲೆ ನಾನು ಇರಬೇಕು
ಆ ಸೂರ್ಯ ಚಂದ್ರ ಇರುವವರೆಗೂ

-ವಿ.ಶ್ರೀನಿವಾಸ.ವಾಣಿಗರಹಳ್ಳಿ
ದೊಡ್ಡ ಬಳ್ಳಾಪುರ (ತಾ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ