ಇಂಡಿ : ಕಾರ ಹುಣ್ಣಿಮೆ ಕರಿ ನಿಮಿತ್ಯ ಇಂಡಿ ತಾಲೂಕಿನ ಶಿರಕನಹಳ್ಳಿ ಗ್ರಾಮದಲ್ಲಿ ಭಾರತ ದೇಶದ ಸಂಪ್ರದಾಯ ಇನ್ನೂ ಮರೆತಿಲ್ಲ ಈ ಹಬ್ಬ ಬಂದರೆ ಎಲ್ಲಾ ಹಳ್ಳಿಯ ಜನರು ಅತಿ ಸಡಗರ ದಿಂದ್ ಆಚರಿಸುತ್ತಾರೆ ಅದೇ ರೀತಿ ಇಂಡಿ ತಾಲೂಕಿನ ಶಿರಿಕನಹಳ್ಳಿ ಗ್ರಾಮದಲ್ಲಿ ಗ್ರಾಮದ ಪೊಲೀಸ್ ಪಾಟೀಲರು ಅದ ಹಣಮಂತ ರಾಯ ಗೌಡ ಮಲಕನಗೌಡ ಪಾಟೀಲ ಅವರು ಕಾರ್ಯಕ್ರಮವನ್ನು ಹಿಂಗಾರಿ, ಮುಂಗಾರಿ, ಅಂತ ನಾಮಕರಣ ಮಾಡುವ ಮುಖಾಂತರ ಕಾರ್ ಹುಣ್ಣಿಮೆ ಕರಿ ಎತ್ತುಗಳು ಮುಂಗಾರು ಹಾಗೂ ಹಿಂಗಾರು ಓಡಿಸಿದರು ಆಮೇಲೆ ಮುಂಗಾರು ಮುಂದೆ ಸಾಗಿತ್ತು ಎಲ್ಲಾ ಊರಿನ ಗ್ರಾಮದ ಎಲ್ಲರೂ ಸಂಭ್ರಮಿಸಿದರು. ಹತ್ತಾರು ಮಂದಿ ಕೂಡಿ ಗುಂಡು ಕಲ್ಲು ಎತ್ತುವದರ ಮೂಲಕ 12 ಮಳೆಗಳ ಭವಿಷ್ಯ ಕೇಳುವದರ ಮೂಲಕ ಊರಿನ ಗ್ರಾಮಸ್ಥರು ಸಂಭ್ರಮಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಗ್ರಾಮದ ಕ್ಷತ್ರಧಿಪತಿ ಅಡವಿಲಿಂಗ್ ಮಹಾರಾಜ್ ರ ಮಠದ ಹತ್ತಿರದಲ್ಲಿ ಇರುವ ಪೊಲೀಸ್ ಪಾಟೀಲ ಗೌಡರು ಅದ ಹನಮಂತ ರಾಯಗೌಡ. ಮಲಕನ್ ಗೌಡ ಪಾಟೀಲ. ಅವರ ಮನೆಯಿಂದ ಮುಂಗಾರು ಮತ್ತು ಹಿಂಗಾರು ಎತ್ತುಗಳಿಗೆ ಬಾಸಿಂಗ ಕಟ್ಟಿ ಆರತಿ ಬೆಳಗಿ ಪೂಜಿಸಿ ಅವರ ಮನೆಯಿಂದ ಮೆರವಣಿಗೆ ಮುಖಾಂತರ ಗ್ರಾಮದ ಮದ್ಯಭಾಗವಾದ ಅಗಸಿ ಬಂಡೆ ಗಲ್ಲಿನಿಂದ ಅಡ್ಡಲಾಗಿ ಕರಿಯ ಕಟ್ಟಿ ಪೂಜೆಸಿ ಮುಂಗಾರು ಮತ್ತು ಹಿಂಗಾರು ನಾಮಕರಣ ಮಾಡಿ ಶೆಂಕರಗೌಡ. ಮಲಕನ ಗೌಡ ಪಾಟೀಲ. ಎತ್ತುಗಳನ್ನು ಓಡಿಸಿದರು.
ಈ ಒಂದು ಹಬ್ಬದ ಸಂದರ್ಭದಲ್ಲಿ ಈ ಊರಿನ ಗ್ರಾಮಸ್ಥರಾದ ಹನುಮಂತರಾಯ ಗೌಡ್ರು ಪಾಟೀಲ್ ಶಂಕರ್ ಗೌಡ ಪಾಟೀಲ್ ಶರಣು ಗೌಡ ಪಾಟೀಲ್ ಶಿವಾಜಿ ಗೌಡ್ ಪಾಟೀಲ್ ಲಕ್ಷ್ಮಣ ಗೌಡ ಪಾಟೀಲ್ ಮಲ್ಲನಗೌಡ ಪಾಟೀಲ್ ಸೇರಿದಂತೆ ಗ್ರಾಮದ ಮುಖಂಡರಾದ ಶ್ರೀಮಂತ ಲೋಣಿ ಲಕ್ಷ್ಮಣ್ ಡೋಮ್ಮನಾಳ ರಾಮಪ್ಪ ಹಟ್ಟಿ ಶಾಂತಗೌಡ ಪಾಟೀಲ್ ಮರೆಪ್ಪ ವಾಲಿಕಾರ್ ಬಸುವ ವಾಲಿಕಾರ್ ಮಂಡೆಪ್ಪ ವಾಲಿಕಾರ್ ತಿಪ್ಪಣ್ಣ ಆರ್ ಕಟ್ಟಿಮನಿ ಯಲ್ಲಪ್ಪ ಹರಿಜನ್ ಇತರರು ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ ಇಂಡಿ




















