ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಳಗಾವಿ:ಅನೈತಿಕ ಸಂಬಂಧ ಹೊಂದಿದವನ ಜೊತೆಗೂಡಿ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

ರಾಯಬಾಗ:ಅನೈತಿಕ ಸಂಬಂಧದ ಜೊತೆಗೂಡಿ ಹೆತ್ತು ಹೊತ್ತು ಸಾಕಿದ್ದ ಮಗನಿಗೆ ತಾಯಿಯೇ ಚಟ್ಟ ಕಟ್ಟಿದ ಘಟನೆ ರಾಯಬಾಗ ಪಟ್ಟಣದ ನಾವಿ ಗಲ್ಲಿಯಲ್ಲಿ ನಡೆದಿದೆ.
ರಾಯಬಾಗದಲ್ಲಿ ಪಾತ್ರೆ ಅಂಗಡಿ ನಡೆಸುತ್ತಿದ್ದ ಸುಧಾ ಬೋಸಲೆಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧವಿತ್ತು ಇದನ್ನು ಮಗ ಅಡ್ಡಿಪಡಿಸುತ್ತಿದ್ದ ಇದೇ ಕಾರಣಕ್ಕೆ ಮನೆಯಲ್ಲಿ ಮಲಗಿದ ಮಗ ಹರಿಪ್ರಸಾದ್ ಬೋಸಲೆ(22) ಎಂಬಾತನನ್ನು ಉಸಿರುಗಟ್ಟಿಸಿ ಕೊಂದು ಹೃದಯಾಘಾತದಿಂದ ಮೃತಪಟ್ಟ ಎಂದು ಬಿಂಬಿಸಲಾಗಿತ್ತು.
ಮೇ 28ರಂದು ಹರಿಪ್ರಸಾದ್ ತೀರಿಹೋದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಂಬಂಧಗಳಿಗೆ ಅನುಮಾನ ಮೂಡಿತ್ತು.
ಕತ್ತಿನಲ್ಲಿ ಕಲೆಗಳು ಇರುವುದನ್ನು ಗಮನಿಸಿ, ಸಂಶಯಾಸ್ಪದ ಸಾವು ಎಂದು ಪೊಲೀಸರಿಗೆ ಮಾಹಿತಿ ನೀಡಿದರು ಇದಾದ ನಂತರದಲ್ಲೇ ತಾಯಿ ತನ್ನ ಅನೈತಿಕ ಸಂಬಂಧಕ್ಕೆ ತೊಂದರೆ ನೀಡಿದ ಮಗನನ್ನು ಕೊಲೆ ಮಾಡಿದ್ದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ರಾಯಬಾಗ್ ಪೊಲೀಸ್ ಠಾಣೆ ಸಿಪಿಐ ಮುಲ್ಲಾ ನೇತೃತ್ವದ ತಂಡ ಆರೋಪಿಯನ್ನ ವಿಚಾರಣೆ ಮಾಡಿದ್ದು,ಕೊಲೆಯೆಂದು ತಿಳಿದು ಬಂದಿದೆ ಪಾಪಿ ತಾಯಿ ಸುಧಾ ಬೋಸಲೆ, ಪ್ರಿಯಕರ ಕುಮಾರ ಬಬಲೇಶ್ವರ,ದೊಡ್ಡಮ್ಮ ವೈಶಾಲಿ ಮಾನೆ,ಸಹೋದರ ಗೌತಮ ಮಾನೆ, ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿ ಸೇರಿ ಎಂಟು ಜನರಿಂದ ಕೊಲೆ ನಡೆದಿದ್ದು ಎಂದು ತಿಳಿದು ಬಂದಿದೆ.
ಸುಧಾಳ ಪಾತ್ರೆ ಅಂಗಡಿಯಲ್ಲಿ ಈ ವೇಳೆ ಪಾತ್ರೆಕೊಳ್ಳಲು ಬಂದಿದ್ದ ಸುಧಾನ ಮನಸ್ಸು ಕದ್ದಿದ್ದ ಕುಮಾರ್ ಎಂಬಾತ ಇವರಿಬ್ಬರ ಅನೈತಿಕ ಸಂಬಂಧ ಮಗ ಹರಿಪ್ರಸಾದಗೆ ಗೊತ್ತಾಗಿತ್ತು ಇದು ಸರಿಯಲ್ಲ ಎಂದು ತಾಯಿಗೆ ಬುದ್ಧಿವಾದ ಹೇಳಿದ ಮಗ
ಹರಿಪ್ರಸಾದ್ನನ್ನು ಪ್ಲಾನ್ ಮಾಡಿಕೊಂಡು ಹರಿಪ್ರಸಾದವನ್ನು ಕೊಲೆ ಮಾಡಿದ್ದಾರೆ.
ವರದಿ:ಉಮೇಶ ಯರಡತ್ತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ