ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಯ ಕರ್ನಾಟಕ ಜನಪರ ವೇದಿಕೆಯಿಂದ‌‌ ಮನವಿ ಪತ್ರ ಸಲ್ಲಿಕೆ

ಧಾರವಾಡದ ಶಹರದಲ್ಲಿ ಸುಮಾರು 20 – 30 ವರ್ಷಗಳಿಂದ ಹೊಟ್ಟೆ ಪಾಡಿಗಾಗಿ ಬಡ ಜನರು ಕೆಲವೊಂದು ರಸ್ತೆಯ ಪಕ್ಕದಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ತಮ್ಮ ಜೀವನ ನಿರ್ವಹಿಸುತ್ತಿದ್ದು ಈ ಬಡ ಜನರ ದಿನ ನಿತ್ಯದ ಜೀವನ ಇದರಿಂದಲೇ ನಡೆಯುತ್ತಿರುವುದು ಆದರೆ ಈಗ ಏಕಾಏಕಿಯಾಗಿ ಯಾವುದೇ ರೀತಿಯ ಸಮಯ ಅವಕಾಶ ನೀಡದೆ ಸದರಿ ಡಬ್ಬಾ ಅಂಗಡಿಗಳನ್ನು ತೆರೆವುಗೊಳಿಸಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದು ವಿಷಾದನೀಯ ಇದರಿಂದ ಈ ಬಡ ಜನರಿಗೆ ದಿಕ್ಕು ತೋಚದಂತಾಗಿ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ,ಕಾರಣ ಈ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಕೆಲ ಕಾಲ ಸಮಯ ಅವಕಾಶದೊಂದಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡ ಪಶ್ಚಿಮ 74 ಕ್ಷೇತ್ರದ ಶಾಸಕರಾದ ಶ್ರೀ ಅರವಿಂದ್ ಬೆಲ್ಲದವರಿಗೆ ಹಾಗೂ ಆಯುಕ್ತರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಸಹಾಯಕ ಆಯುಕ್ತರು ವಲಯ ಕಚೇರಿ-1 ಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾಧವ, ಸೋಮು ಬೈಲವಾಡ,ಮಲ್ಲಿಕಾರ್ಜುನ ಅಸುಂಡಿ,ಅನ್ವರ ನದಾಫ,ಹರ್ಷದ ಪಠಾಣ, ಅಶೋಕ ಭಂಡಾರಿ ಮಂಜುನಾಥ ಅಂಗಡಿ, ಶಿವಾನಂದ ಎಲಿಗಾರ,ಗುರು ಸುಣಗದ, ಕಲ್ಲಪ್ಪ ಕುಂದರಗಿ,ತನ್ವೀರ್ ಪಠಾಣ,ಪ್ರಕಾಶ ಪಾಟೀಲ,ಶೇಖರ ಶೆಟ್ಟಿ,ಮೌಲಾ ಪೆಂಡಾರಿ, ಪರಶರಾಮ ಶಿರಹಟ್ಟಿ,ಇರ್ಷಾದ ಧಾರವಾಡಕರ,ವಿದ್ಯಾನಂದ ಅಂಗಡಿ, ಶ್ಯಾಮ ಮುಲ್ಲಾ,ಅನಿಲ ಶಿಂಧೆ,ಮುಂತಾದವರು ಉಪಸ್ಥಿದ್ದರು.
ವರದಿ-ಸದಾಶಿವ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ