ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಾದರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಮಾದರಿ ನಮ್ಮ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ.
ಗುರುಕುಲ ಸಂಪ್ರದಾಯದ ಶಿಕ್ಷಣದ ಜೊತೆಗೆ ಪರಿಸರ ಸ್ನೇಹಿಯೂ ಆದ ಕೃಷಿಯ ಮಹತ್ವವನ್ನು ತೋರಿಸುತ್ತಾ,ಮಕ್ಕಳಿಗೆ ಶಿಸ್ತು , ಸಂಯಮ,ಸಂಸ್ಕಾರ,ಸರಳತೆಯೊಂದಿಗೆ ಜೀವನದ ಮೌಲ್ಯಗಳನ್ನು ತಿಳಿಸುತ್ತಾ ಮಾದರಿಯಾದ ವಸತಿ ಶಾಲೆಯಾಗಿದೆ.
ಸುಂದರ ಪ್ರಕೃತಿಯ ಮಡಿಲಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗುತ್ತಿದೆ ನಮ್ಮ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ.
“ಅಜ್ಞಾನವನ್ನು ನಾಶ ಮಾಡುವ ಜ್ಞಾನದ ಬೆಳಕನ್ನು ಮನುಷ್ಯನು ಪಡೆದುಕೊಂಡಾಗ ಹಗಲು ಹೊತ್ತಿನಲ್ಲಿ ಸೂರ್ಯನು ಎಲ್ಲದರ ಮೇಲೂ ಬೆಳಕು ಹರಿಸುವಂತೆ,ಅವನ ಜ್ಞಾನವು ಎಲ್ಲವನ್ನೂ ಪ್ರಕಾಶಗೊಳಿಸುತ್ತದೆ ಎಂಬುದು ಈ ನಿಟ್ಟಿನಲ್ಲಿ ಮುಗ್ಧ ಮನಸ್ಸಿನ, ಮುದ್ದು ಮಕ್ಕಳ ಜ್ಞಾನ ಹಾಗು ಭವಿಷ್ಯವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಹಗಲಿರುಳು ಶ್ರಮಿಸಿ,ಮಾರ್ಗದರ್ಶನ ನೀಡುತ್ತಿರುವ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಬಸವರಾಜ್ ಕೆ.ಕೆ. ಸರ್ ಮತ್ತು ಅಲ್ಲಿನ ಸಿಬ್ಬಂದಿವರ್ಗ. ದವರು ಮಕ್ಕಳ ಹತ್ತಿರ ನಡೆದುಕೊಳ್ಳುವ ರೀತಿ ನೋಡಿದರೆ ಎಂತವರಿಗೂ ಕೂಡಾ ಸಂತೋಷವಾಗುತ್ತದೆ ಮತ್ತು ಇಂತಹ ವಸತಿ ಶಾಲೆ ನಮಗೆ ಏಕೆ ದೊರಲಿಲ್ಲವೆಂದು ಸಂಕಟವಾಗುತ್ತದೆ ಈ ದೃಶ್ಯ ನೋಡಲು ತುಂಬಾ ಸುಂದರವಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ