ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಷ್ಟೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಹಳ್ಳಿ ಪ್ರತಿಭೆ:ಕುಮಾರಿ ಲಕ್ಷ್ಮಿ ರಾಠೋಡ

ಕಲಬುರ್ಗಿ:ಚಿತ್ತಾಪುರ ತಾಲೂಕಿನ ಸ್ಟೇಷನ್ ತಾಂಡಾದ ಬಾಲಕಿ ಕಡು ಬಡತನದಲ್ಲೇ ಅರಳಿದ ಹಳ್ಳಿ ಪ್ರತಿಭೆ ಕು|| ಲಕ್ಷ್ಮೀ ರಾಠೋಡ ತಾವು ಜೀವನದಲ್ಲಿ ಏನು ಸಾಧನೆ ಮಾಡಲು ಆಗುವುದಿಲ್ಲ ಎಂದು ಭಾವಿಸಿಕೊಂಡಿದ್ದರು.
ಪಟ್ಟಣದ ಸ್ಟೇಷನ್ ತಾಂಡಾದ ಬಾಲಕಿ ಒಬ್ಬಳು ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಬಾಲಕಿಗೆ ಗ್ರಾಮದ,
ಹಿರಿಯರು ಹಾಗೂ ಗ್ರಾಮಸ್ಥರು ಈ ಬಾಲಕಿಯ ಸಾಧನೆ ನೋಡಿ,ಬಡ ಕುಟುಂಬದಿಂದ ಬಂದ ನಮ್ಮ ತಾಂಡಾದ ಮಗಳು ಚಿನ್ನದ ಪದಕ ಪಡೆದು ನಮ್ಮ ಮನೆ ಮಗಳು ಮತ್ತು ಗ್ರಾಮಕ್ಕೆ ಮಾದರಿಯಾಗಿದ್ದಾಳೆ.
ಜೂನ್ 26ರಂದು ಮೈಸೂರಿನಲ್ಲಿ ನಡೆದ ಶೀಟೋ ರಿಯೋ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿತ್ತಾಪೂರ ಪಟ್ಟಣದ ಸ್ಟೇಷನ್ ತಾಂಡಾದ ಬಾಲಕಿ ಕಲ್ಯಾಣ ಜೇನ್ ಸಿಟೋರಿಯೋ ಕರಾಟೆ ಅಸೋಸಿಯೇಷನ್ ಕರ್ನಾಟಕದ ಅಧ್ಯಕ್ಷ ದಶರತ್ ದುಮ್ಮಾನಸೂರ್ ಅವರ ಗರಡಿಯಲ್ಲಿ ತರಬೇತಿ ಪಡೆದು ಕರಾಟೆ ಬ್ಲಾಕ್ ಬೆಲ್ಟ್ ಪಡೆದ ನಮ್ಮ ಗ್ರಾಮದ ಕು|| ಲಕ್ಷ್ಮಿ ರಾಠೋಡ ತಂದೆ ಪ್ರೇಮನಾಥ್ ರಾಠೋಡ ತಾಯಿ ಸೋನಾಬಾಯಿ ಇವರ ಸುಪುತ್ರಿ ಕರಾಟೆ ಕಲಿಯಲು ಭಾಂದವರಿಗೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಬಾಲಕಿಯರಿಗೆ ತರಬೇತುದಾರರಾಗಿರುವ ಕರಾಟೆ ಸ್ಪರ್ಧೆಯಲ್ಲಿ ಎಲ್ಲರನ್ನು ಪರಾಭವಗೊಳಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಕುಮೀತೆಯಲ್ಲಿ(ಫೈಟಿಂಗ್)ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ನಮ್ಮ ತಾಲೂಕ ಹಾಗೂ ಪಟ್ಟಣದ ಸ್ಟೇಷನ್ ತಾಂಡಾದ ಹೆಮ್ಮೆಯ ಮಗಳು ಕು|| ಲಕ್ಷ್ಮಿ ರಾಠೋಡ ಇವಳ ಸಾಧನೆ ನೋಡಿ ಇಡೀ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.
ಇವರ ಈ ಸಾಧನೆಗೆ ತರಬೇತಿದಾರರಾದ ಧಶರತ್ ದುಮ್ಮಾನಸೂರ್ ಅವರು ಮತ್ತು ಚಿತ್ತಾಪೂರ ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ಭೀಮರಾಯ,ಮರೆಪ್ಪ ಮತ್ತು ತಾಲೂಕ ಅಧ್ಯಕ್ಷ ಮಹಾದೇವ ಹಾಗೂ ಗ್ರಾಮಸ್ಥರು ಸೇರಿ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಧನೆಗೈದ ಬಾಲಕಿಯ ಸಹೋದರ ಅಶೋಕ ರಾಠೋಡ,ಆಕಾಶ,ಐತಿಹಾಸಿಕ ಕ್ಷೇತ್ರಗಳ ಸಂರಕ್ಷಕರಾದ ಭೀಮು ಹೋಳಿಕಟ್ಟಿ,ಅನಂತನಾಗ ದೇಶಪಾಂಡೆ,ಶಿವಶೇಖರ ನಾಟಿಕಾರ್,ವಿಶಾಲ್ ಕಡಬೂರ್,ಬಸವರಾಜ,ಚಂದ್ರಶೇಖರ, ಭೀಮಾಶಂಕರ್,ವಿನಾಯಕ,ಸುನೀಲ್,ಲಕ್ಷ್ಮಣ, ಅವಿನಾಶ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ