ಮಂಗಳೂರು ನಗರದ ಕದ್ರಿ ಪಾರ್ಕ್ ನ ಯುದ್ಧ ಸ್ಮಾರಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ಸೈನಿಕರ ಸಂಘ ಪ್ರತಿ ವರ್ಷದಂತೆ ಈ ದಿನವೂ ಕಾರ್ಗಿಲ್ ವಿಜಯ ದಿನವನ್ನು ವಿಜೃಂಭಣೆಯಿಂದ ಆಚರಿಸಿದರು. ಟಿ 55 ಯುದ್ಧ ಟ್ಯಾಂಕರ್ ನ ಲೋಕಾರ್ಪಣೆಯು ಇವತ್ತಿನ ಆಕರ್ಷಣೆ ಆಗಿತ್ತು.
ಬೆಳಿಗ್ಗೆ 9:15ಕ್ಕೆ ವಿದ್ಯುಕ್ತವಾಗಿ ಕಾರ್ಯಕ್ರಮ ಆರಂಭಗೊಂಡು ಟಿ 55 ಟ್ಯಾಂಕರನ್ನು ನಿವೃತ್ತ ಸೈನಿಕರ ಸಂಘದ ಹಿರಿಯ ಕರ್ನಲ್ ನಿಟ್ಟೆ ಗುತ್ತು ಶ್ರೀ ಶರತ್ ಭಂಡಾರಿ, ಬಿಗೇಡಿಯರ್ ಐ. ಎನ್. ರೈ, ಕಾಪ್ಟನ್ ಗಣೇಶ್ ಕಾರ್ಣೀಕ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಮತ್ತು ನೂರಾರು ನಿವೃತ್ತ ಸೈನಿಕರ ಹಾಗೂ ದೇಶಾಭಿಮಾನಿ ನಾಗರಿಕರ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ನಂತರ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಕಾರ್ಗಿಲ್ ಯದ್ಧದ ಬಗ್ಗೆ ತಮ್ಮ ಅನುಭವ ಮತ್ತು ಅಭಿಪ್ರಾಯವನ್ನು ಹಂಚಿಕೊಂಡರು.
ಅಗಲಿದ ಸೖನಿಕರಿಗೆ ಒಂದು ನಿಮಿಷ ದ ಮೌನ ಪ್ರಾರ್ಥನೆ, ನೆರೆದ ದೇಶಾಭಿಮಾನಿಗಳಿಂದ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಗೈಯಲಾಯಿತು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವರದಿ: ಚಂದ್ರಶೇಖರ ಹೆಬ್ಬಾರ್ ಕೊಲ್ಯ.




















