
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಲೂಕಾ ಕ್ರೀಡಾಂಗಣದಲ್ಲಿ ಇಂದು ನಡೆದ ತಾಲೂಕು ದಸರಾ ವಾಲಿಬಾಲ್ ಕ್ರೀಡಾಕೂಟದಲ್ಲಿ ಬಾಲಕ ಹಾಗೂ ಬಾಲಕಿಯರ ಎರಡು ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡ ತಂಡದ ಸಾಧನೆ ನಿಜಕ್ಕೂ ಶ್ಲಾಘನೀಯ.
ಇಡೀ ಪಂದ್ಯಾವಳಿಯುದ್ದಕ್ಕೂ ಅಪ್ರತಿಮ ಕೌಶಲ್ಯ, ಅಚಲ ನಂಬಿಕೆ ಮತ್ತು ಅದ್ಭುತ ಸಂಘಟಿತ ಆಟವನ್ನು ಪ್ರದರ್ಶಿಸಿದ ಈ ತಂಡವು ಇಂದು ವಿಜಯದ ನಗೆ ಬೀರಿದೆ. ಬಾಲಕರ ವಿಭಾಗದಲ್ಲಿ ಲಚ್ಯಾಣ ತಂಡ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದಿದ್ದು ಮತ್ತು ಬಾಲಕಿಯರ ವಿಭಾಗದಲ್ಲಿ ಮತ್ತೆ ಲಚ್ಯಾಣ ತಂಡ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಲಚ್ಯಾಣದ ಹಿರಿಯ ಕ್ರೀಡಾಪುಟಗಳು ಹಾಗೂ ತಂಡದ ತರಬೇತುದಾರರಾದ ಶ್ರೀ ಎಂ .ಎಸ್.ಪಾಟೀಲ್ ಹಾಗೂ ರಮೇಶ್ ಅಹಿರಸಂಗ ಅವರ ಪಾತ್ರ ದೊಡ್ಡದಿದೆ. ಆಟಗಾರರ ದೌರ್ಬಲ್ಯಗಳನ್ನು ತಿದ್ದಿ, ಅವರಲ್ಲಿ ಆತ್ಮವಿಶ್ವಾಸ ತುಂಬಿದ ಕೀರ್ತಿ ಅವರಿಗೆ ಸಲ್ಲುತ್ತದೆ.




















