ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಿಡಗಲ್ ನಲ್ಲಿ ಬಾರ್ಡರ್ ಕ್ರೇಂ ಮೀಟಿಂಗ್


ಪಾವಗಡ: ರಾಜ್ಯ,ಅಂತರಾಜ್ಯಗಳ ಪೊಲೀಸರ ನಡುವೆ ಮಾಹಿತಿ,ವಿಚಾರ ವಿನಿಮಯ ಆರೋಗ್ಯಕರವಾಗಿದ್ದರೆ ಪ್ರಕರಣ ಬೇಧಿಸಲು ಸಾಧ್ಯವಾಗುತ್ತದೆ ಎಂದು ಮಧುಗಿರಿ ಉಪವಿಭಾಗದ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಿಡಗಲ್ ಗಿರಿ ಬಳಿ ಇರುವ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಹಾಗೂ ಮಧುಗಿರಿ ಉಪವಿಭಾಗದ ನೇತೃತ್ವದಲ್ಲಿ ಬುಧವಾರ ಗಡಿಭಾಗದ ಅಪರಾಧ ಸಭೆಯಲ್ಲಿ ಮಾತನಾಡಿದ ಅವರು ಪೋಲೀಸ್ ಇಲಾಖೆಯಲ್ಲಿ ಕಾನೂನು ಒಂದೇ ಇದ್ದರು,ಕೆಲ ನಿಯಮಗಳು ಮಾತ್ರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಲಿಸಿದರೆ ವಿಭಿನ್ನತೆಯಿಂದ ಕೂಡಿರುತ್ತವೆ.
ಹಾಗಾಗಿ ಅನ್ಯರಾಜ್ಯಗಳಲ್ಲಿ ಅಪರಾಧ ಪತ್ತೆ ಕಾರ್ಯದಲ್ಲಿ ಭಾಷೆ,ನಿಯಮಗಳು ತೊಡಕಾಗದಂತೆ ಪತ್ತೆ ಹಚ್ಚುವಲ್ಲಿ ಸ್ನೇಹ ಸೌಹಾರ್ದ ಭಾವನೆಯೊಂದಿಗೆ ಪೊಲೀಸ್ ಇಲಾಖೆಗಳ ನಡುವೆ ವಿಚಾರ, ಮಾಹಿತಿ ವಿನಿಮಯ ಉತ್ತಮವಾಗಿರಬೇಕು. ಪತ್ತೆ ಕಾರ್ಯದ ದಾಖಲಾತಿ ಸಂಗ್ರಹದಲ್ಲಿ ಭಾಷೆ,ರಾಜ್ಯಗಳು ತೊಡಕಾಗದಂತೆ ಪ್ರತಿಯೊಬ್ಬರು ಸಹಕಾರಿಯಾಗಬೇಕು ಎಂದು ಸಹ ಪೊಲೀಸ್ ಅಧಿಕಾರಿಗಳ ನಡುವೆ ಡಿ.ವೈ.ಎಸ್ಪಿ ವೆಂಕಟೇಶ್ ನಾಯ್ಡ್ ಅವರು ಮಾಹಿತಿ ಹಂಚಿಕೊಂಡರು.
ಗಡಿಭಾಗಗಳಲ್ಲಿ ದಿನಬೆಳಗಾದರೆ ಪೊಲೀಸ್ ಇಲಾಖೆಗೆ ಒಂದಿಲ್ಲೊಂದು ಅಂತರಾಜ್ಯ ಪ್ರಕರಣ ಎಡತಾಕುತ್ತಲೇ ಇರುತ್ತವೆ.ಅಂತಹ ಸಂದರ್ಭದಲ್ಲಿ ಪೊಲೀಸರು ಪತ್ತೆ ಕಾರ್ಯಕ್ಕೆ ಇಳಿದಾಗ ಮಾಹಿತಿ ಕೊಡುವ ಮನಸ್ಥಿತಿಗಳು ಇಲ್ಲ ಭಾಷೆ ಅಡೆತಡೆ ಮಾಡಬಹುದು . ಈ ಕುರಿತಾಗಿ ಬಾಹ್ಯ, ಆಂತರೀಕ ಪೊಲೀಸ್ ಅಧಿಕಾರಿಗಳ ವಿಚಾರ ವಿನಿಮಯಿಂದ ಕೊಲೆ, ಕಳ್ಳತನ, ತಲೆಮರೆಸಿಕೊಂಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗುತ್ತವೆ ಎಂದು ಬೆಂಗಳೂರು, ತುಮಕೂರು,ಅನಂತಪುರ,ಪುಟ್ಟಪರ್ತಿ,ಚಿಕ್ಕಬಳ್ಳಾಪುರ, ಹಲವೆಡೆಯಿಂದ ಈ ಸಭೆಗೆ ಬಂದಂತಹ ಅಧಿಕಾರಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಆಂಧ್ರದ ಪೆನುಗೊಂಡ ಡಿವೈಎಸ್ಪಿ ರಮ್ಯ,ಸಿ.ಬಿ.ಪುರ ಡಿ.ವೈ.ಎಸ್ಪಿ ವಾಸುದೇವ, ನೆಲಮಂಗಲ ಡಿ.ವೈ.ಎಸ್ಪಿ ಗೌತಮ್,ಅಧಿಕಾರಿಗಳಾದ ಇನ್ಸ್ಪೆಕ್ಟರ್ ಕಾಂತರೆಡ್ಡಿ,ಕೆ.ಪಿ.ಸತ್ಯನಾರಾಯಣ, ಲಿಂಗರಾಜು,ಜಿ.ನಾಗರಾಜು ರಾವ್,ಬಿ.ಟಿ.ವೆಂಕಟೇಶ್ವರ್,.ಕೆ.ನರೇಂದ್ರ,ನಾಗಸ್ವಾಮಿ,ಪಿ.ಬಾರ್ಗವ್ ರೆಡ್ದಿ,ಎನ್.ವಿ.ರಮಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:- ಅನಿಲ್ ಕುಮಾರ್ ಪಾವಗಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ