ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೇಶದ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ:ಕರಣ ಸುಭೇದಾರ

ಯಾದಗಿರಿ:ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಮಂಡಿಸಿದ ಆಯವ್ಯಯವು ಭಾರತದ ದೇಶದ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದಂತಿದೆ ಎಂದು ಶಹಾಪೂರ ಮತಕ್ಷೇತ್ರದ ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ಹೇಳಿದರು.
ನಮ್ಮ ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು,2047ನೇ ಇಸವಿಗೆ ವಿಕಸಿತ ಭಾರತ ನಿರ್ಮಾಣದ ಗುರಿ,ವಿಶ್ವದಲ್ಲೇ 3 ನೇ ಬಲಾಢ್ಯ ಆರ್ಥಿಕ ಶಕ್ತಿ ಆಗಬೇಕೆಂದು ಸಂಕಲ್ಪದ ಕಡೆ ದಿಟ್ಟ ಹೆಜ್ಜೆಯನ್ನು ಈ ಬಜೆಟ್‍ನಲ್ಲಿ ಕೊಟ್ಟಿದ್ದಾರೆ.ಈ ಬಜೆಟ್‍ನಲ್ಲಿ ಅತಿ ಹೆಚ್ಚು ಹಣವನ್ನು ಮೂಲಭೂತ ಸೌಕರ್ಯಕ್ಕೆ ಒದಗಿಸಲಾಗಿದೆ.ಸಂಕಲ್ಪದ ನಡೆಗೆ ದಿಟ್ಟ ಹೆಜ್ಜೆಯನ್ನು ಈ ಬಜೆಟ್‍ನಲ್ಲಿ ಇಟ್ಟಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು ಅದರಲ್ಲೂ ವಿಶೇಷವಾಗಿ 5,44,000 ಕೋಟಿ ರೂ.ಗಳನ್ನು ರಸ್ತೆ,ರೈಲು,ಸಮುದ್ರಯಾನ ಮತ್ತು ವಿಮಾನ ಯಾನ ಕ್ಷೇತ್ರದ ಸಂಪರ್ಕಕ್ಕೆ ಕೊಟ್ಟಿದ್ದಾರೆ ದೇಶದ ಸುರಕ್ಷತೆಗೆ ಅತಿ ಹೆಚ್ಚು ಒತ್ತನ್ನು ಕೊಟ್ಟಿದ್ದಾರೆ ಎಂದು ಸುಬೇದಾರ ಹರೀಶ್ ವ್ಯಕ್ತಪಡಿಸಿದರು.
ದೇಶದ ಯುವ ಜನಾಂಗದ ಆಶಾಭಾವನೆಗಳಿಗೆ ತಕ್ಕಂತೆ ಈ ಬಜೆಟ್‍ನಲ್ಲಿ ತಂತ್ರಜ್ಞಾನ,ವಿಜ್ಞಾನ, ಸಂಶೋಧನೆಗೆ ಸ್ವತಂತ್ರ ಭಾರತದಲ್ಲಿ ಪ್ರಥಮ ಬಾರಿ 1,15,000 ಕೋಟಿಯನ್ನು ಮೀಸಲಿಟ್ಟಿದ್ದಾರೆ.ಇದು ದೇಶದ ಸುವರ್ಣಾಕ್ಷರದಲ್ಲಿ ಬರೆದು ಇಡುವಂಥದ್ದು ಈ ದೇಶವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೊದಲನೇ ಸ್ಥಾನದತ್ತ ಕೊಂಡೊಯ್ಯಲು ಮೋದಿಜೀ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ರೈತರಿಗೆ ಪ್ರಧಾನಮಂತ್ರಿಯವರು ಕಿಸಾನ್ ಯೋಜನೆ ಮುಂದುವರೆಸಿದ್ದಾರೆ 11 ಕೋಟಿಗೂ ಹೆಚ್ಚು ರೈತರಿಗೆ ಇದರಿಂದ ಪ್ರಯೋಜನ ಸಿಗುತ್ತಿದೆ ಫಸಲ್ ಬಿಮಾ ಯೋಜನೆಯಲ್ಲಿ ಸುಮಾರು 4 ಕೋಟಿಗಿಂತ ಹೆಚ್ಚು ರೈತರಿಗೆ ಸಹಾಯ ಮಾಡಿದ್ದನ್ನು ಪ್ರಸ್ತಾಪ ಮಾಡಿದ್ದರು.
ಯುಪಿಎ ಸರಕಾರದ 10 ವರ್ಷಗಳ ಅವಧಿಯಲ್ಲಿ 2004-14 ಕರ್ನಾಟಕಕ್ಕೆ 61 ಸಾವಿರ ಕೋಟಿ ಅನುದಾನ ಗ್ರಾಂಟ್ ಇನ್ ಎಯ್ಡ್ ಕೊಟ್ಟಿತು.ನರೇಂದ್ರ ಮೋದಿಜೀ ಅವರ 10 ವರ್ಷಗಳ ಆಡಳಿತಾವಧಿಯಲ್ಲಿ ಕರ್ನಾಟಕಕ್ಕೆ ಕೊಟ್ಟ ಅನುದಾನ 2,36,000 ಕೋಟಿ ಎಂದು ಗಮನ ಸೆಳೆದರು.ಅಷ್ಟೇ ಅಲ್ಲದೆ ತೆರಿಗೆ ಪಾಲು “ಟ್ಯಾಕ್ಸ್ ಇನ್ ಡೆವೊಲ್ಯೂಷನ್” ಹಿಂದೆ ಯುಪಿಎ ಸರಕಾರ 10 ವರ್ಷಗಳಲ್ಲಿ ಕೇವಲ 82 ಸಾವಿರ ಕೋಟಿ ಕೊಟ್ಟಿತ್ತು. ಮೋದಿಜೀ ಅವರ ಎನ್‍ಡಿಎ ಸರಕಾರವು 10 ವರ್ಷಗಳಲ್ಲಿ ಈ ಸಂಬಂಧ 2,82,000 ಕೋಟಿ ಕೊಟ್ಟಿದೆ ಎಂದರು.

ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!