“ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ “
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬಂಡಿಹಾಳ ಗ್ರಾಮದಲ್ಲಿ ಸೋದರಿಯರು, ಮುದ್ದು ಮಕ್ಕಳು, ನಾಗದೇವತೆಗೆ “ನಮ್ ಪಾಲ್ ನಿಮ್ ಪಾಲ್ ಸರಿ ಪಾಲ್” ಹೇಳುವುದರ ಮೂಲಕ ನಾಗದೇವತೆಗೆ ಹಾಲನ್ನು ಹಾಕಿ ನಾಗರ ಪಂಚಮಿಯನ್ನು ಆಚರಣೆ ಮಾಡಲಾಯಿತು.
ನಾಗರ ಪಂಚಮಿ ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ ನಾಗರ ಪಂಚಮಿಯ ಹಿಂದಿನ ದಿನ ಸಹೋದರಿ ನಾಗದೇವತೆಗೆ ಬೇಡಿಕೊಂಡರೆ ಸಹೋದರನಿಗೆ ಲಾಭ ಹಾಗೂ ರಕ್ಷಣೆ ಸಿಗುತ್ತದೆ.
“ಪಂಚಮಿ ಹಬ್ಬ ಬಂತವ್ವ ಸನಿಯಾಕ,ನಮ್ಮಣ್ಣ ಬರಲಿಲ್ಲ ಇನ್ನೂ ಕರಿಯಾಕ, ಕರಿ ಸೀರೆ ಉಡುಸಾಕ, “ಎನ್ನುವ ಜಾನಪದ ಹಾಡು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣು ಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಗಳ ನಂತರ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಹೀಗೆ ಹಬ್ಬಗಳು ಒಂದರ ಮೇಲೊಂದು ಆಚರಣೆಗಳು ಆರಂಭವಾಗುತ್ತವೆ.
ವರದಿ:ಬಸವರಾಜ ಕೆ ಕಳಸಪ್ಪನವರ




















