ವಿಜಯನಗರ : ಸಂಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಅನ್ನಪೂರ್ಣ ತುಕಾರಾಂ ಪರ
ದಿ: 11-11-2024 ರಂದು, ಮಲ್ಲಾಪುರ, ಲಕ್ಕಲಹಳ್ಳಿ, ಸೂರವ್ವನಹಳ್ಳಿ, ಗೊಲ್ಲರಹಟ್ಟಿ, ಅಗ್ರಹಾರಗಳಿಗೆ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಭೇಟಿ ನೀಡಿ ಮತ ಯಾಚಿಸಿದರು.
ನಾವು ಎರಡು ಕ್ಷೇತ್ರದ ಜನ ಒಂದೇ ಕುಟುಂಬದ ಸಂಬಂಧಿಗಳಿದ್ದಂತೆ,ಗಡಿ ಭಾಗದ ಹಳ್ಳಿಗಳ ಜನರು ಕೂಡ್ಲಿಗಿ ಕ್ಷೇತ್ರದ ಶಿಕ್ಷಣ, ಆರೋಗ್ಯವನ್ನು ಅವಲಂಬಿಸಿದ್ದಾರೆ. ಹಾಗೆಯೇ ಶಿಕ್ಷಣ – ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಶ್ರಮಿಸುತ್ತಾ ಇರುವೆ ಇಲ್ಲಿನ ಜನರು ಶಿಕ್ಷಣ, ಆರೋಗ್ಯ ಮತ್ತು ಸ್ವಚ್ಛತೆಯ ಅಭಿವೃದ್ಧಿಗಾಗಿ ಯಾವುದೇ ಆಸೆ ಆಕಾಂಕ್ಷೆಗಳಿಗೆ ಆಸೆ ಪಡದೇ ಸತ್ಯ ಮತ್ತು ಸಾಮಾಜಿಕ ನ್ಯಾಯ ಪರ ಇರುವ, ಇದೇ ತಿಂಗಳು ನವೆಂಬರ್ 13 ನೇ ತಾರೀಖಿನಂದು
ಕ್ರ. ಸ. 1 ಕ್ಕೆ ಹಸ್ತದ ಗುರುತಿಗೆ ತಮ್ಮ ಅಮೂಲ್ಯ ಮತ ಕೊಟ್ಟು ಕಾಂಗ್ರೆಸ್ ಪಕ್ಷ ವನ್ನು ಗೆಲ್ಲಿಸಬೇಕು ಎಂದೂ ಮನವಿ ಮಾಡಿದರು. ಈ ವೇಳೆ ಓಬಯ್ಯ, ಬೊಮ್ಮಪ್ಪ, ದೇವೆಂದ್ರಪ್ಪ, ಗೌಡ್ರು ಓಬಯ್ಯ, ಈಶ್ವರ, ಓಬಯ್ಯ, ಸಾರಪ್ಪ, ಗುರುಸ್ವಾಮಿ, ಗಾದ್ರೆಪ್ಪ, ನಾಗರಾಜ, ವೀರಣ್ಣ, ಎರ್ರಿಸ್ವಾಮಿ, ಪಂಪಣ್ಣ, ಮಲ್ಲಿಕಾರ್ಜುನ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ




















