ಕಲಬುರಗಿ/ ಕಾಳಗಿ : ನಮ್ಮ ಕರ್ನಾಟಕ ಸರ್ಕಾರವು ನಡೆಸುತ್ತಿರುವ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯ ಸರ್ಕಾರ 2025- 26 ನೇ ಸಾಲಿನ ಸಮೀಕ್ಷೆಯು 22 -09-2025 ರಿಂದ ಪ್ರಾರಂಭವಾಗುತ್ತದೆ. ಈ ಸಮೀಕ್ಷೆಯಲ್ಲಿ ದೀಕ್ಷ ಲಿಂಗಾಯತ ಸಮಾಜದವರು ತಮ್ಮ ಮನೆಗೆ ಗಣತಿ ದಾರರು ಬಂದಾಗ ತಾವುಗಳು ಉಪಜಾತಿ ಕಲಂ ನಲ್ಲಿ ಬಣಜಿಗ ಲಿಂಗಾಯತ ಎಂದು ತಪ್ಪದೇ ಬರೆಸಬೇಕು ಎಂದು ಬಣಜಿಗ ದೀಕ್ಷ ಲಿಂಗಾಯತ ಸಮಾಜದ ಮುಖಂಡರು ವೀರಣ್ಣ ಗಂಗಾಣಿ ಮನವಿ ಮಾಡಿದರು.
ಹಿಂದಿನ ಕಾಲದಿಂದಲೂ ಬಣಜಿಗ ಹೋಗಿ ಲಿಂಗಾಯತ ನಂತರ ವೀರಶೈವ ಲಿಂಗಾಯತ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರದ ಜಾತಿ ಕಾಲಂ ನಲ್ಲಿ ಬಣಜಿಗ ಎಂದು ಇದೆ ಮತ್ತು ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಧರ್ಮ ಹಿಂದು, ಜಾತಿ ಕಾಲಂ ನಲ್ಲಿ ವೀರಶೈವ ಲಿಂಗಾಯತ, ಉಪಜಾತಿ ಕಾಲಂನಲ್ಲಿ ಕೋಡ್ ನಂಬರ್ ಅ -0125 ನಲ್ಲಿ ಬಣಜಿಗ ಲಿಂಗಾಯತ ಎಂದು ಬರೆಸಬೇಕೆಂದು ಮನವಿ ಮಾಡಿಕೊಂಡರು.
ವರದಿ ಚಂದ್ರಶೇಖರ ಆರ್ ಪಾಟೀಲ್




















