ಚಾಮರಾಜನಗರ/ ಗುಂಡ್ಲುಪೇಟೆ :
ಕರ್ನಾಟಕ ಕಾವಲು ಪಡೆಯ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಹಾಗೂ ನಾಡ ಗೀತೆಗೆ ನೂರರ ಸಂಭ್ರಮದ ಅಂಗವಾಗಿ ಗುಂಡ್ಲುಪೇಟೆ ತಾಲ್ಲೂಕು ಘಟಕ ಆಯೋಜಿಸಿದ್ದ 30 ದಿನಗಳ ನಿರಂತರ ಕಾರ್ಯಕ್ರಮದ 30 ಇಲಾಖೆ ಕನ್ನಡ ಸವಿ ನೆನಪಿನ ಅಂಗವಾಗಿ ತಿಂಗಳ ರಾಜ್ಯೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ದಿನಾಂಕ 11/12/2025ರ ಗುರುವಾರ ಸಂಜೆ 4:30ಘಂಟೆಗೆ ಪಟ್ಟಣದ ಸಿ.ಎಂ.ಎಸ್.ಮಕ್ಕಳ ಮನೆಯಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಹಾಗೂ ಪ್ರಗತಿಪರ ಹೋರಾಟಗಾರರ ಸಮ್ಮುಖದಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದು ಎಲ್ಲಾ ಕನ್ನಡ ಅಭಿಮಾನಿಗಳು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಸವಿನಯ ಪ್ರಾರ್ಥನೆ ಎಂದು ಎ.ಅಬ್ದುಲ್ ಮಾಲಿಕ್ ತಾಲ್ಲೂಕು ಅಧ್ಯಕ್ಷರು, ಕರ್ನಾಟಕ ಕಾವಲು ಪಡೆ ಗುಂಡ್ಲುಪೇಟೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಕುಮಾರ್ ಗುಂಡ್ಲುಪೇಟೆ




















