ಚುನಾವಣೆಯಲ್ಲಿ
ಕೊಟ್ಟ ನೋಟಿಗಾಗಿ
ವೋಟ್ ಹಾಕಿದ್ದೀರೆಂದು
ಅಲ್ಪಮತಗಳಿಂದ ಗೆದ್ದ
ಶಾಸಕನ ಹಾರಾಟ.
ಚುನಾವಣೆಯಲ್ಲಿ
ನೋಟು ಕೊಟ್ಟರೂ,
ಅಲ್ಪಮತಗಳಿಂದ ಸೋಲಿಸಿದರೆಂಬ
ಸೋತ ಅಭ್ಯರ್ಥಿ ಗೋಳಾಟ.
ನೋಟು ಕೇಳದಿದ್ದರೂ
ಬೇಡವೆಂದರೂ ಕೇಳದೆ ,
ಪ್ರತಿಸ್ಪರ್ಧಿ ಅಭ್ಯರ್ಥಿಗಳೇ
ಅವರು ಕೊಟ್ಟರೆಂದು ಇವರು
ಇವರು ಕೊಟ್ಟರೆಂದು ಅವರು,
ಇಬ್ಬರೂ ಕೊಟ್ಟರೆಂದು ,
ಸ್ವಾಭಿಮಾನಿ ಮತದಾರರ ಮನದೊಳಗೆ ತೊಳಲಾಟ.
ಗೆದ್ದವರು
ಬೆಂಗಳೂರು ದೆಹಲಿಯಲ್ಲಿ,
ಸೋತವರು ತಮ್ಮೂರಿನಲ್ಲಿ
ಮತದಾರರು ತಮ್ಮ ಕೆಲಸದಲ್ಲಿ
ಅಭಿವೃದ್ಧಿ ಆಕಾಶದಲ್ಲಿ.
- ಕರಿಸಿಧ್ಧನಗೌಡ ಮಾಲಿಪಾಟೀಲ ,ಬೂದಗುಂಪ
9945195785.




















