ಬಾಗಲಕೋಟೆ /ಮುಧೋಳ: ತಾಲೂಕಿನ ಕುಳಲಿ ಗ್ರಾಮದ ಶ್ರೀ ಮತಿ ಶಿವಶರಣೆ ಸಿದ್ದವ್ವ ಸಿದ್ದಪ್ಪ ಬನಾಜಗೋಳ [80] ವಯೋಸಹಜ ಕಾಯಿಲೆಗೊಳಗಾದ ಅವರು ನಿಧನ ಹೊಂದಿದ್ದು, 6 ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗುರುನಾಥಾರೂಢರ ಮಠದ ಶಂಕರಾನಂದ ಶ್ರೀಗಳು, ಭೀಮಾವಧೂತರ ಮಠದ ಪಂಚಾಕ್ಷರಿ ಶ್ರೀಗಳು, ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವಶಾಸ್ತ್ರಿಗಳು, ಹಿರಿಯರಾದ ನಾಗಪ್ಪ ಐಹೊಳೆ, ಪಿ.ಜಿ.ಗಣಿ, ಶಿವಪ್ಪ ಪವಾಡಶೆಟ್ಟಿ, ಸಂಗಪ್ಪ ಗಣಿ ಇನ್ನೂ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮುಧೋಳ.ಜಮಖಂಡಿ. ಅಥಣಿ.ಗೋಕಾಕ.ಬೀಳಗಿ .ಬನಹಟ್ಟಿ.ಸೇರಿದಂತೆ ವಿವಿಧ ಭಾಗಗಳಿಂದ ಬಂದ ಕಲಾವಿದರಿಂದ ಶಿವಭಜನೆ ಜರುಗಿತು.
- ಕರುನಾಡ ಕಂದ ಪತ್ರಿಕೆ




















