ಗದಗ ಜಿಲ್ಲೆಯ ಗದಗ ತಾಲೂಕಿನ ಲಿಂಗದಾಳ ಗ್ರಾಮಕ್ಕೆ ಸತತವಾಗಿ 27 ವರ್ಷಗಳಿಂದ ಗದಗ ಕರ್ನಾಟಕ ರಸ್ತೆ ಸಾರಿಗೆ ಗದಗ ಡಿಪೋ ಚಾಲಕರಾದ ಶ್ರೀ ಯಲ್ಲಪ್ಪ ರುದ್ರಪ್ಪ ಸುತುಗಟ್ಟಿಯವರು, ಚಾಲಕರಾಗಿ ಸುಮಾರು 27 ವರ್ಷಗಳ ಕಾಲ ನಿರಂತರ ಸೇವೆ ಮಾಡಿದ್ದಾಗಿ, ಮತ್ತು ನಿರ್ವಾಹಕರಾಗಿ ಶ್ರೀ ಪಾಂಡುರಂಗ ಹನುಮರೆಡ್ಡಿ ಹಂಚಿನಾಳ್ ಅವರು ಸೇವೆ ಸಲ್ಲಿಸಿದ್ದಕ್ಕಾಗಿ, ಲಿಂಗದಾಳ ಗ್ರಾಮದ ಸಾಮಾಜಿಕ ಕಾರ್ಯಕರ್ತರು, ಇವರ ಸೇವೆಗೆ ಸನ್ಮಾನ ಮಾಡುವುದರ ಮುಖಾಂತರ ಗೌರವ ಸೂಚಿಸಿದ್ದಾರೆ. ಲಿಂಗದಾಳ ಗ್ರಾಮದ ಗ್ರಾಮಸ್ಥರು ಮತ್ತು ಸಾಮಾಜಿಕ ಕಾರ್ಯಕರ್ತರಾದ, ಅಲ್ತಾಫ್ ಮೊಹಮ್ಮದ್ ರಫೀಕ್, ಬಸವರಾಜ್ ಸಹಜಾನಂದ್, ಸಿದ್ದು ಸಾಗರ್ ಸಮಾಜಪರ ಹೋರಾಟಗಾರರು ಒಳಗೊಂಡು ಗೌರವ ಪೂರ್ಣ ಸೇವೆಯನ್ನು ಮಾಡಿರುವ ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗೆ ಗೌರವ ಸೂಚಿಸಿದರು.
ವರದಿಗಾರರು – ವಿನೋದ್ ಎಸ್ ಹೂಗಾರ್.




















