ನಗು ಮೊಗದ ಕವಿ
ಮೃದು ಮಧುರ ಮಾತಿನ ಕವಿ
ಕನ್ನಡ ಸಾಹಿತ್ಯದ ಸಮನ್ವಯ ಕವಿ,
“ಹೂ ನಗೆ”ಯ ಬೀರಿ,
“ಕಾವ್ಯಾಕ್ಷಿ “ಯಾಗಿ,
“ಆಕಾಶ ಬುಟ್ಟಿ “ಯಂತೆ,
ಆಗಸದೆತ್ತರಕ್ಕೇರಿ,
ಪ್ರೇಮಿಗಳಿಗೆ “ಮಧು ಚಂದ್ರ “
ತೋರಿ, “ಹಕ್ಕಿ ಪುಚ್ಚ ” ದಿಂದ,
ಮಕ್ಕಳ ಮನ ತಣಿಸಿದ ಕವಿ,
“ನೆಲ ಮುಗಿಲು “ಗಳ ಒಂದಾಗಿಸುವ ಶಕ್ತಿ ಕವಿ,
“ಎರಡು ದಡ” ಬೆಸೆವ
ಸಮನ್ವಯ ಕವಿ,
ನೊಂದವರಿಗೆ ಧ್ವನಿಯಾದ
“ದೀಪಧಾರಿ” ಮಾತೆಲ್ಲ ಕವಿತೆಯಾಗಿಸುವ ಕವಿ,
ಸರಸ ಕವಿ, ವಿನೋದ ಕವಿ,
ಈ ನಮ್ಮ ಕಣವಿ,
ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಡೆದ ಕವಿ,
ನಗು ಮೊಗದ ಮೃದು ಮಧುರ
ಮಾತಿನ ಕವಿ, ಚೆಂಬೆಳಕಿನ ಕವಿ
ನಮ್ಮ ಚೆನ್ನವೀರ ಕಣವಿ.
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕೊಪ್ಪಳ.
ಮೊ.7996790189




















