೧. ಕೆಲಸ.
ಆಶ್ವಾಸನೆಗಳ
ಕೊಡೋದಷ್ಟೇ ಅಲ್ಲ,
ರಾಜಕಾರಣಿಗಳ ಕೆಲಸ,
ಕೊಟ್ಟ ಆಶ್ವಾಸನೆಗಳ
ಮರೆಯುವುದೂ
ಅವರದೇ ಕೆಲಸ!.
೨. ಕಟ್ಟೋಣ.
ಕಟ್ಟುವುದು ಬೇಡ ಅಲ್ಲಿ
ಮಸೀದಿ, ಮಂದಿರ,
ಕಟ್ಟೋಣ ನಾವಿಲ್ಲಿ
ಮನೋ ಮಂದಿರ,
ಆದೀತು ಆಗ
ಈ ಜಗ ಸುಂದರ.
೩. ಕಠೋರ ಸತ್ಯ.
ನಮ್ಮದು ಜಾತ್ಯಾತೀತ ( ಜಾತ್ಯತೀತ ) ರಾಷ್ಟ್ರ,
ಪತ್ರಿಕೆಗಳಲ್ಲಿ,
ಜನಪ್ರತಿನಿಧಿಗಳ
ಬಾಯಿ, ಭಾಷಣದಲ್ಲಿ!
ವಾಸ್ತವದಲಿ!?
ಜಾತೀಯತೆಯ ರಾಷ್ಟ್ರ,
ಇದಲ್ಲವೇ ಕಠೋರ ಸತ್ಯ!.
೪.ಅಸಮಾನತೆ.
ಹಣವಿದ್ದಾಗ ಇವ ನಮ್ಮವ
ಇವ ನಮ್ಮವ ಎನ್ನುವ
ಜನರೇ ಹಣವಿಲ್ಲದ
ಬಡವನಕಂಡು, ಇವನಾರವ,
ಅನ್ನುತ್ತಿರುವರಲ್ಲ, ಇದು
ಎಂತಹ ವಿಪರ್ಯಾಸ!
- ಶಿವಪ್ರಸಾದ್ ಹಾದಿಮನಿ. ಕೊಪ್ಪಳ.




















