
ಹುಬ್ಬಳ್ಳಿ ನಗರಕ್ಕೆ 01.02.2026 ರಂದು ವಿನಯ್ ರಾಜಕುಮಾರ್ ಆಗಮಿಸಿದ್ದರು. ಸಿನಿಮಾ ಒಂದರ ಪ್ರಚಾರಕ್ಕಾಗಿ ಬೆಳಗಾವಿ ಜಿಲ್ಲೆಗೆ ಹೊರಟ ಅವರಿಗೆ ಉತ್ತರ ಕರ್ನಾಟಕದ ಆಟೋ ರಿಕ್ಷಾ ಚಾಲಕರ ಸಂಘ ಗಬ್ಬೂರು ಬೈಪಾಸ್ ಬಸವೇಶ್ವರ ಆಟೋರಿಕ್ಷಾ ಸಂಘದ ಅಧ್ಯಕ್ಷರುಗಳು ಮತ್ತು ಯುವ ಕರ್ನಾಟಕ ವೇದಿಕೆ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹೃತ್ಪೂರ್ವಕವಾಗಿ ಹೂ ಮಾಲೆ ಹಾಕುವ ಮುಖಾಂತರ ಸ್ವಾಗತ ಕೋರಿದರು.
ಇದೇ ಸಮಯದಲ್ಲಿ ದೊಡ್ಮನೆಯ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಪುತ್ತಳಿಯ ಬಗ್ಗೆ ಚರ್ಚಿಸಿ ಉತ್ತರ ಕರ್ನಾಟಕದ ಕನ್ನಡಪರ ಹೋರಾಟಗಾರರಿಂದ ಅಭಿನಂದನೆ ಸಲ್ಲಿಸಲಾಯಿತು ಎಂದು ಉತ್ತರ ಕರ್ನಾಟಕದ ಶೇಖರಯ್ಯ ಮಠಪತಿ ಆಟೋರಿಕ್ಷಾ ಚಾಲಕರ ಸಂಘ ಅಧ್ಯಕ್ಷರು ಮತ್ತು ಪ್ರಕಾಶ್ ಸಂಗೇನಹಳ್ಳಿ ತಿಳಿಸಿದ್ದಾರೆ.
ವರದಿ ಸುನಿಲ್ ಪಿ. ಸಜ್ಜನ್




















