ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ತ್ರೀ ಎಂದರೆ ಅಷ್ಟೇ ಸಾಕೇ…..

ತಾಯಿಯಾಗಿ ಮಗುವಿಗೆ ಮೊದಲು ಜೋಲಾಲಿ ಹಾಡುವಳು, ಲಾಲಿ ಹಾಡಿನಲ್ಲಿ ಜೀವನದ ಕಠೋರ ಪಾಠಗಳನ್ನು ಹೇಳಿ ಕೊಡುವ ಮೊದಲ ಗುರು ಇವಳು

ಮನೆಯ ನಾಲ್ಕು ಗೋಡೆಗಳ ನಡುವಿನ ಮೌನವನ್ನು ಮನಸಾರೆ ಬರೆದು ಎಲ್ಲರ ಮನಮುಟ್ಟಿಸುವ ಕವಯಿತ್ರಿ ಇವಳು

ಮನದೊಳಗೆ ಕಟ್ಟಿ ಹಾಕಿದ ಕನಸುಗಳಿಗೆ ಬಣ್ಣ ಹಚ್ಚಿ ಪರದೆ ಮೇಲೆ ನಟಿಸಿ ನಗಿಸುವ ಮಹಾನಟಿ ಇವಳು

ಕೈಯಲ್ಲಿ ಶಾಹಿ ಹಿಡಿದರೆ ಖಾಲಿ ಕಾಗದಕ್ಕೂ ಜೀವ ತುಂಬಿ ಬತ್ತಿ ಹೋದ ಭಾವಕ್ಕೆ ನೀರೆರೆದು ಪುನರ್ಜನ್ಮ ನೀಡುವ ಸಾಹಿತಿ ಇವಳು

ಅನ್ಯಾಯದ ವಿರುದ್ಧ ಮಹಾ ಜ್ವಾಲೆಯಾಗಿ ಉರಿದು ಧರ್ಮ ಉಳಿಸುವ ನ್ಯಾಯ ದೇವತೆ ಇವಳು

ಜನನಿಯಾಗಿ ತಾಯಿ ಜನ್ಮ ನೀಡಿದರೆ ಆ ಜೀವಕೆ ಮರು ಜನ್ಮ ನೀಡುವ ವೈದ್ಯೆ ಇವಳು

ಮಹಿಳೆ ಬರಿ ಮೌನದ ಕಥೆಯಾದವಳಲ್ಲ ಸಾವಿರ ಮಹಿಳೆಯರ ಮೌನಕ್ಕೆ ಮರುಧ್ವನಿಯಾದ ಹೋರಾಟಗಾರ್ತಿ ಇವಳು

ಮುಗ್ದತೆಯ ಮಗಳಾಗಿ ತವರು ಮನೆ ತೊರೆದು ಗಂಡಿನ ಬಾಳ ಬೆಳಗಿಸಲು ಬಂದ ಬಾಳಸಂಗಾತಿ ಇವಳು

ಮಮತೆಯ ತಾಯಿಯಾಗಿ ಅಕ್ಕರೆ ತೋರುವ ಅಜ್ಜಿಯಾಗಿ
ಮೆಚ್ಚುಗೆಯ ಮಗಳಾಗಿ ಪ್ರೀತಿಯ ತೋರುವ ಸತಿಯಾದವಳು

ಸಕ್ಕರೆಯಂತ ಸ್ನೇಹಿತೆಯಾಗಿ ತುಂಟಾಟ ಮಾಡುವ ತಂಗಿಯಾಗಿ
ನೆಚ್ಚಿನ ನಾದಿನಿಯಾಗಿ ಅಮ್ಮನಂತೆ ಪ್ರೀತಿಸುವ ಅತ್ತಿಗೆಯಾದವಳು

ಸೊಗಸಾದ ಸೊಸೆಯಾಗಿ ಗಡುಸಾಗಿ ಗದರಿ ಪ್ರೀತಿ ತೋರುವ ಅತ್ತೆಯಾಗಿ
ಹೆಣ್ಣಿನ ಎಲ್ಲಾ ಪಾತ್ರವ ಪೋಷಿಸಿದವಳು
ಇವಳು ಹೆಣ್ಣಿನ ಎಲ್ಲಾ ಪಾತ್ರವ ಪೋಷಿಸಿದವಳು..

ಇವಳು ಪರಮೇಶ್ವರನಲ್ಲಿ ಅರ್ಧಾಂಗಿಯಾಗಿ ದೈವವೇ ಆಗಿಹಳು
ಆ ಸೃಷ್ಟಿಕರ್ತನಿಗೂ ಜನ್ಮ ನೀಡಿ ಮಹಾತಾಯಿ ಆದವಳು..

ಈ ದೇವತೆಯ ವರ್ಣಿಸಲು ಪದಗಳೇ ಆದವು ಪುಷ್ಪ ಮಾಲಿಕೆ , ಇವಳನ್ನು ಸ್ತ್ರೀ ಎಂದರೆ ಅಷ್ಟೇ ಸಾಕೆ…
ಇವಳನ್ನು ಸ್ತ್ರೀ ಎಂದರೆ ಅಷ್ಟೇ ಸಾಕೇ…..

  • ಪ್ರೀತಿಯಿಂದ ❤️
    ಕವಿತ ವಿಜಯಕುಮಾರ್
    ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!