
ದಕ್ಷಿಣ ಕನ್ನಡ : ಇರ ಗ್ರಾಮದ ಬಂಗಾರುಗುಡ್ಡೆಯಲ್ಲಿ ತ್ಯಾಜ್ಯ ಘಟಕ ಮಾಡಲು ಸ್ಥಳ ಆಯ್ಕೆ ಮಾಡಿರುವುದು. ಕಾನೂನು ಬಾಹಿರ ಕ್ರಮವಾಗಿದೆ.
೧. ಪುರಾತನ ಗುಳಿಗನ ಸನ್ನಿಧಿ
೨. ಅನಾಧಿಯ ಮಸೀದಿ
೩. ಶ್ರೀ ಮಲರಾಯ ಧೂಮಾವತಿ ಮತ್ತು ಪರಿವಾರ ಸನ್ನಿಧಿ.
೪.ಅನಾಧಿಯಲ್ಲಿ ಸ್ಥಾಪಿತವಾದ ಕನಡರೆ ಪಲ್ಲ ಇವೆಲ್ಲಾ ಸುಮಾರು 10ಮೀಟರ್ ಅಂತರದೊಳಗೆ ಇದ್ದರೂ ಯಾವುದನ್ನು ಲೆಕ್ಕಿಸದೆ ತ್ಯಾಜ್ಯ ಘಟಕ ಮಾಡಲು ಮುಂದಾಗಿರುವ ಕ್ರಮ ಎಲ್ಲರಿಗೂ ಬೇಸರ ತಂದಿದೆ. ತ್ಯಾಜ್ಯ ಘಟಕ ವಾಸನೆಯಲ್ಲಿ ದೈವಗಳಿಗೆ ಧೂಪ ದೀಪ ನೀಡಬೇಕೇ ? ವಾಸನೆಯ ವಾತಾವರಣದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡಲಾಗುವುದೇ ಕನಡ ರೆ ಪಲ್ಲ ಮುಂದೆ ಹೂಳು ತೆಗೆದ ನಂತರ ಒಸರಿನ ನೀರಿಗೆ, ಹತ್ತಿರದ ಕುಡಿಯುವ ಬಾವಿಯ ನೀರು ತ್ಯಾಜ್ಯ ಘಟಕದ ರಚನೆ ಆದರೆ ಒಸರಿನ ನೀರು ಕುಡಿದು ಕಾಯಿಲೆ ಕಸಾಲೆಗೆ ಆಹ್ವಾನ ಕೊಟ್ಟಂತೆ ಆಗುವುದು. ಈ ಹಿನ್ನೆಲೆಯಲ್ಲಿ ಅನ್ಯಾಯದ ವಿರುದ್ಧ ಶ್ರೀ ಮಲರಾಯ,ಧೂಮಾವತಿ,ಬಂಟ,ಪರಿವಾರ ಶಕ್ತಿಗಳ ಕ್ಷೇತ್ರದಲ್ಲಿ ಸೇರಿದ ಭಕ್ತಾಧಿಗಳು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಭಕ್ತಾಧಿಗಳು ಸುಮಾರು 91 ಮಂದಿ, ಅದೇ ರೀತಿ ಜುಮ್ಮಾ ಮಸೀದಿಯ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು,ಶ್ರೀ ಬೋಲ್ಲು ಕಲ್ಲೂ ಶ್ರೀ ಗುಳೆಗೇಶ್ವರ ಕ್ಷೇತ್ರ,ಗ್ರಾಮಸ್ತರು, ಮಾನ್ಯ ಜಿಲ್ಲಾಧಿಕಾರಿಗಳಿಗೆ,ಕರ್ನಾಟಕ ಸರಕಾರದ ಸನ್ಮಾನ್ಯ ಸಭಾಪತಿಗಳು ಆಗಿರುವ ಸನ್ಮಾನ್ಯರಾದ ಶ್ರೀ ಯು.ಟಿ.ಖಾದರ್ ಅವರಿಗೂ ಇರ ಪಂಚಾಯಿತಿಗೂ ಮನವಿ ಕೊಡಲಾಗಿದೆ. ದಿನಾಂಕ 6.4.2026,ರಂದು ಅಪಾರ ಸಂಖ್ಯೆಯಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಬಂಗಾರು ಗುಡ್ಡೆಯಲ್ಲಿ ಇರ,ಬಾಳೆಪುಣಿ ನಾಗರಿಕರು ಒಳಗೊಂಡಂತೆ ಹೋರಾಟ ಸಮಿತಿ ರಚನೆ ಮಾಡಲಾಗಿದ್ದು. ಕೂಡಲೇ ಅಧ್ಯಯನ ಮಾಡದೆ ಮುಂದೆ ಮಾಡುವ ತ್ಯಾಜ್ಯ ಘಟಕದಿಂದ ಆಗಲಿರುವ ಅಪಾರ ತೊಂದರೆಗೆ ಎಡೆ ಮಾಡದಂತೆ ರದ್ದು ಇಲ್ಲಿಂದಮಾಡಲು ಆಗ್ರಹಿಸಲಾಯಿತು. ಇದೇ ಸಮಯದಲ್ಲಿ ಹೋರಾಟ ಸಮಿತಿಯನ್ನು ರಚಿಸಲಾಯಿತು.




















