ಸಿರುಗುಪ್ಪ – ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ 2025- 26 ನೇ ಸಾಲಿನ ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಿಎಂಐಡಿಪಿ ಅಡಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳು ಸಿರುಗುಪ್ಪ ತಾಲೂಕು ಚಿಕ್ಕ ಬಳ್ಳಾರಿ ಗ್ರಾಮದ ಬೀರಹಳ್ಳಿ ಫಕೀರಮ್ಮ ಮನೆಯಿಂದ ನಾಯಕರ ಗೋವಿಂದಯ್ಯ ಮನೆಯವರಿಗೆ ತಳವಾರ ದ್ಯಾವಣ್ಣ ಮನೆಯಿಂದ ಸಿಂಧನೂರು ರಾಮಣ್ಣ ಮನೆಯವರಿಗೆ ತಳವಾರ ಮೌನೇಶ್ ಮನೆಯಿಂದ ನಾಗಲಿಂಗ ಮನೆಯವರೆಗೆ ಮತ್ತು ಬೀರಳ್ಳಿ ನರಸಯ್ಯ ಮನೆಯಿಂದ ತಳವಾರ ವೆಂಕಟೇಶ್ ಮನೆಯವರೆಗೆ ಮತ್ತು ಇತರೆ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ 83.93 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಣ್ಣ ಮುದುಕಪ್ಪ ನಾಯಕರ ದ್ಯಾವಣ್ಣ ಕುರುಬರ ದ್ಯಾವಣ್ಣ ನರಸಿಂಹ ನಾಯಕ್ ಸುರೇಶ್ ರೆಡ್ಡಿ ಬಿ ವೆಂಕಟೇಶ್ ಹೆಚ್ ಗಣೇಶ್ ಪವನ್ ದೇಸಾಯಿ ಬಿಎಮ್ ಮಣಿಕಂಠನಾಯಕ್ ಪಿಡಬ್ಲ್ಯೂಡಿ ಇಂಜಿನಿಯರ್ ಗಳಾದ ಅನಿಲ್ ಮೊಹಮ್ಮದ್ ಪಾಷಾ ಚಿಕ್ಕಬಳ್ಳಾರಿ ಗ್ರಾಮದ ಅನೇಕ ಗಣ್ಯರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ


















