ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಮತಾಮಯಿ

​ಹಲವು ಕಣ್ಣುಗಳಲ್ಲಿ ಒಲವು ಚೆಲ್ಲಿದ ತಾಯಿ
ಮನುಜಾಂತಃಕರಣದ ಮಮತಾಮಯಿ
ಮನೆಮಂದಿತರವಿರುವ ನೆರೆಮಂದಿಯಲು ನೀನು
ಮಾತೃಕೆಯೆ ಮೈವೆತ್ತ ಕರುಣಾಮಯಿ ।
ನಿನಗು ಬಂದಿತೆ ಕೇಡು?
ಬಹುಜನಕೆ ನೋವು ॥

​ಕನಿಕರದ ಕರುಳಿತ್ತು ಎಳವೆಯಲೆ ಹಿರಿತನದು
ಮನೆತನಕೆ ಬೆಲೆಯಿತ್ತು ಭೌತಿಕದಿ ಬೆಳೆದು
ನೈತಿಕತೆ ಹುದುಗಿತ್ತು ಆತ್ಮೋನ್ನತಿಯ ನೆನೆದು
ಮಾತೃಕೆಯೆ ಮೈವೆತ್ತ ಕರುಣಾಮಯಿ |
ನಿನಗು ಬಂದಿತೆ ಕೇಡು?
ಬಹುಜನಕೆ ನೋವು ||

ತುಹಿನಗಿರಿ ತಪ್ಪಲಲಿ ತಪಗೈದು ಬಂದಂತೆ
ನಡೆನುಡಿಯ ತುಂಬಿತ್ತು ಸದು ವಿನಯ ಮಮತೆ
ನಗೆಹೂವ ಬೀರುವೊಲು ಹಗೆಕಾಣದಿರು ಕ್ಷಮತೆ
ಮಾತೃಕೆಯೆ ಮೈವೆತ್ತ ಕರುಣಾಮಯಿ |
ನಿನಗು ಬಂದಿತೆ ಕೇಡು?
ಬಹುಜನಕೆ ನೋವು ||

ಶತಮಾನಗಳ ಮೀರು ಮಾನವತೆ ತೇರೇರು
ಕನಸು ಮೊಳೆದಂತಿತ್ತು ಬಳಗಪೂರ್ತಿ
ಮೋಡವಿರದ ನಡುವೆ ಸಿಡಿಲೆರಗಿ ಕರಗಿದೆಯೆ
ಮಾತೃಕೆಯೆ ಮೈವೆತ್ತ ಕರುಣಾಮಯಿ |
ನಿನಗು ಬಂದಿತೆ ಕೇಡು?
ಬಹುಜನಕೆ ನೋವು ||

✍️ಮಾಸ್ಕೇರಿ ಎಂ.ಕೆ. ನಾಯಕ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,
ದಾಂಡೇಲಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!