ಯಲಬುರ್ಗಾ : ತಾಲೂಕಿನ ರ.ಬ.ಕೊ. ವಿಜಯನಗರ ಜಿಲ್ಲೆ ಹಾಲು ಒಕ್ಕೂಟ ಬಳ್ಳಾರಿ ಯಲಬುರ್ಗಾ ಉಪ ಕಚೇರಿಯಲ್ಲಿ ಯಲಬುರ್ಗಾ ಮತ್ತು ಕುಕುನೂರು ತಾಲೂಕಿನ 9 ಹೊಸ ಸಂಘಗಳಿಗೆ ಎನ್ಪಿಡಿಡಿ ಯೋಜನೆಯೆಲ್ಲಿ ಒಕ್ಕೂಟದ ಅನುದಾನದಲ್ಲಿ ನೀಡಲಾದ ಸಂಘದ ಹಾಲು ಶೇಖರಣ ಪರಿಕರಗಳನ್ನು ಒಕ್ಕೂಟದ ನಿರ್ದೇಶಕರಾದ ಶ್ರೀಮತಿ ಕಮಲಮ್ಮ ಲಕಮಾಪುರವರ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು, ನೇತೃತ್ವದಲ್ಲಿ ಸಂಘಗಳ ಕಾರ್ಯದರ್ಶಿಗಳಿಗೆ ವಿತರಣೆ ಮಾಡಲಾಯಿತು.
ನಂತರದಲ್ಲಿ ಕುಷ್ಟಗಿ ತಾಲೂಕಿನ ವಿಸ್ತರಣಾಧಿಕಾರಿಗಳಾದ ಬಸವರಾಜ್ ಯರದೊಟ್ಟಿ ಮಾತನಾಡಿ ೧೯೧೨ರ ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ಭಾರತದಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಲು ಕನಿಷ್ಟ ಸದಸ್ಯರ ಸಂಖ್ಯೆ ಹತ್ತು ಇರತಕ್ಕದ್ದು. ಇದನ್ನು ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ನೋಂದಾಯಿಸಬೇಕು. ಷೇರುಗಳನ್ನು ಸದಸ್ಯರಿಗೆ ನೀಡುವುದರ ಮುಖಾಂತರ ಬಂಡವಾಳವನ್ನು ಸಂಗ್ರಹಿಸುತ್ತದೆ.
ಸ್ವಯಂ ಪ್ರೇರಣೆಯ ಸಂಘಟನೆ – ಸಹಕಾರಿ ಸಂಘದ ಸದಸ್ಯತ್ವ ಐಚ್ಛಿಕವಾಗಿದೆ. ಸದಸ್ಯತ್ವವು ಮುಕ್ತವಾಗಿದ್ದು,ಯಾವುದೇ ಭೇದವಿಲ್ಲದೆ ಎಲ್ಲಾ ವಯಸ್ಕರಿಗೂ ಸದಸ್ಯರಾಗಲು ಅವಕಾಶವಿದೆ. ಗ್ರಾಮಸ್ಥರು ಒಗ್ಗಟ್ಟಾಗಿ ಸಹಕಾರ ಸಂಘವನ್ನು ಬೆಳೆಸಬಹುದು ಎಂದರು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿಗಳಾದ ಶ್ರೀಮತಿ ರತ್ನಮ್ಮ ಹಕ್ಕುಂಡಿ, ಮಾನ್ಯಶ್ರೀ ಬಸವರಾಜ ಯರದೊಡ್ಡಿ, ಸಮಾಲೋಚಕರಾದ ಶ್ರೀ ಸೋಮಶೇಖರ ಗುರಿಕಾರ್ ಹಾಗೂ ಶ್ರೀ ಶರಣಪ್ಪ ಕಟಬಿರವರು, ತಾಲೂಕಿನ ವಿವಿಧ ಸಂಘಗಳ ಮಹಿಳೆಯರು ಭಾಗವಹಿಸಿದ್ದರು.
ವರದಿ ಯಮನೂರ ಎಂ. ಸಿಂಗನಾಳ




















