ಹುಬ್ಬಳ್ಳಿ: ಕರ್ನಾಟಕದಲ್ಲಿ ಎಸ್ ಐ ಆರ್ ನ್ನು ಕಾಂಗ್ರೆಸ್ ವಿರೋಧಿಸಿತ್ತು.ಇದೀಗ ಅದನ್ನು ಮ್ಯಾನಿಪುಲೆಟ್ ಮಾಡೋ ಕೆಲಸ ಮಾಡುತ್ತಿದೆ. ಮ್ಯಾಪಿಂಗ್ ನಲ್ಲಿ ಕೂಡಾ ಅನೇಕ ಅಕ್ರಮಗಳನ್ನು ಮಾಡಿತ್ತು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸೀದಿಗಳಲ್ಲಿ ಎನ್ಯೂಮರೇಷನ್ ಫಾರ್ಮ್ ನೀಡಲಾಯಿತು. ರಾಜ್ಯದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಪೌರತ್ವವನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಆದ್ರೆ ರಾಜ್ಯದಲ್ಲಿ ಅಕ್ರಮ ವಲಸಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.
ಇದು ದೇಶದ ಆಂತರಿಕ ಭದ್ರತೆಗೆ ಧಕ್ಕೆ ನೀಡಲಿದೆ. ಸರ್ಕಾರ ಪಿಆರ್ ಸಿ ಸುತ್ತೋಲೆ ಯನ್ನು ಕೂಡಲೇ ಹಿಂಪಡೆಯಬೇಕು. ಗೃಹ ಸಚಿವರು ಆರ್ ಎಸ್ ಎಸ್ ಬಿಜೆಪಿ ಮಾತನಾಡದೇ ಇದ್ರೆ ಅವರಿಗೆ ಉಂಡಿದ್ದು ಅರಗಲ್ಲಾ. ಹೀಗಾಗಿ ಅವರು ಪ್ರತಿನಿತ್ಯ ಆರ್ ಎಸ್ ಎಸ್ ಬಿಜೆಪಿ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಬೇರೆ ಘಟನೆಗಳ ಬಗ್ಗೆ ಅವರು ಗಮನಹರಿಸುತ್ತಿಲ್ಲ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿಯೇ ಪಿ ಆರ್ ಸಿ ನೀಡಿರಲಿಲ್ಲಾ. ಆದ್ರೆ ರಾಜ್ಯದಲ್ಲಿ ನೀಡೋ ಕೆಲಸ ಮಾಡುತ್ತಿದೆ. ರಾಜ್ಯ ಗೃಹ ಸಚಿವರು ಅಕ್ರಮ ವಲಸಿಗರನ್ನು ಪತ್ತೆ ಮಾಡೋ ಕೆಲಸ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.




















